ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ಸಾಯ ಸಮೀದ ಕೂಟೆಲ್ ಮಂಜುನಾಥ ಆಚಾರ್ಯ ಇವರ ಮನೆ ಮೇಲೆ ಬಿರುಸಿನ ಗಾಳಿ ಹಾಗೂ ಮಳೆಯಿಂದ ಮರ ಮುರಿದು ಬಿದ್ದು ಸಂಪೂರ್ಣ ನಾಶಗೊಂಡಿದೆ.
ಸೋಮವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಈ ಸಂದರ್ಭ 85ವರ್ಷ ಪ್ರಾಯದ ಮಂಜುನಾಥ ಆಚಾರ್ಯ ಹಾಗೂ ಮಗ ಮತ್ತು ಸೊಸೆ ಮನೆಯೊಳಗೆ ಇದ್ದರು ಮರ ಮುರಿಯುವ ದೊಡ್ಡ ಶಬ್ದ ಕೇಳಿ ಮನೆಯವರು ನಡೆಯಲು ಸಾಧ್ಯವಾಗದ ಮಂಜುನಾಥ ಆಚಾರ್ಯರನ್ನು ಎತ್ತಿ ಹೊರಗೆ ಓಡಿ ಹೋದ ಕಾರಣ ಅದೃಷ್ಢವಶಾತ್ ಯಾರಿಗೂ ಅಪಾಯವಾಗಲಿಲ್ಲ. ಮಕ್ಕಳು ಶಾಲೆಗೆ ಹೋಗಿದ್ದ ಕಾರಣ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಕೆ.ಪಿ. ಅನಿಲ್ ಕುಮಾರ್, ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ ಭೇಟಿ ನೀಡಿದ್ದಾರೆ.