ಮುಳ್ಳೇರಿಯ: ಕುಂಟಾರು ಎಯುಪಿ ಶಾಲೆಯಲ್ಲಿ ಮಾದಕದ್ರವ್ಯ ಮಾಸಾಚರಣೆಯ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳಿಂದ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು. ನಯನ ಕುಮಾರ್ ನಿರ್ದೇಶಿಸಿರುವ "ಕಾವಲುಗಾರು" ಎಂಬ ನಾಟಕವನ್ನು ಶಾಲೆಯಲ್ಲಿ ಪ್ರದರ್ಶಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಹಾಗೂ ರಕ್ಷಕರು ನಾಟಕದ ಕುರಿತು ಪ್ರಶಂಶಿಸಿದರು. ಮಾದಕ ದ್ರವ್ಯ ವಿರುದ್ಧ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ನಾಟಕವನ್ನು ಅನೇಕ ಕೇಂದ್ರಗಳಲ್ಲಿ ಬೀದಿ ನಾಟಕವಾಗಿ ಪ್ರದರ್ಶಿಸಬೇಕೆಂದು ವೀಕ್ಷಕರು ಒತ್ತಾಯಿಸಿದರು.