HEALTH TIPS

ಪುತ್ರಿಯ ವಿವಾಹಕ್ಕೆ ಮೀಸಲಿಟ್ಟ ಹಣದಿಂದ 'ಡಾ. ವಂದನಾ ದಾಸ್ ಸ್ಮಾರಕ ಕ್ಲಿನಿಕ್: ಸಾಮಾನ್ಯ ಜನರಿಗೆ ಉತ್ತಮ ಉಚಿತ ಚಿಕಿತ್ಸೆ

                  ಕೊಲ್ಲಂ: ಸಾಮಾನ್ಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ವಂದನಾ ದಾಸ್ ಅವರ ಪೋಷಕರು ತ್ರಿಕುನ್ನಪುಳದಲ್ಲಿ ಕ್ಲಿನಿಕ್ ಸ್ಥಾಪಿಸಿದ್ದಾರೆ.

                   ವಂದನಾ ಹತ್ಯೆಯಾದ ಒಂದು ವರ್ಷದ ನಂತರ ಮೋಹನ್ ದಾಸ್ ಮತ್ತು ವಸಂತಕುಮಾರಿ ದಂಪತಿಗಳು ಮಗಳ ಆಸೆಯಂತೆ ಕ್ಲಿನಿಕ್ ನಿರ್ಮಿಸಿದರು. ಒಬ್ಬಳೇ ಮಗಳ ಮದುವೆಗೆ ಮೀಸಲಿಟ್ಟ ಹಣವೂ ಇದಕ್ಕೆ ಬಳಕೆಯಾಗಿದೆ. 

                 ವಸಂತಕುಮಾರಿ ಅವರು ತಿರ್ಕುನ್ನಪುಳದಲ್ಲಿ ಕುಟುಂಬದ ಪಾಲು ಪಡೆದ ಜಮೀನಿನಲ್ಲಿ ಕ್ಲಿನಿಕ್ ನಿರ್ಮಿಸಲಾಗಿದೆ. ಹಿಂದಿನ ಕಟ್ಟಡ ಡಾ. ವಂದನಾದಾಸ್ ಮೆಮೋರಿಯಲ್ ಕ್ಲಿನಿಕ್ ಅನ್ನು ನವೀಕರಿಸಿ ನಿರ್ಮಿಸಲಾಯಿತು. ಮಾರ್ಚ್‍ನಲ್ಲಿ ಉದ್ಘಾಟನೆ ಮಾಡುವ ಉದ್ದೇಶದಿಂದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಕ್ಲಿನಿಕ್ ನೋಂದಣಿ ಮತ್ತು ಪರವಾನಗಿ ಸೇರಿದಂತೆ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಂಡಿಲ್ಲ.

              ತಿರ್ಕುನ್ನಪುಳದಲ್ಲಿ ಸಾಮಾನ್ಯ ಜನರಿಗಾಗಿ ಕ್ಲಿನಿಕ್ ಮಾಡಬೇಕೆಂಬ ತನ್ನ ಆಸೆಯನ್ನು ವಂದನಾ ತನ್ನ ಪೋಷಕರೊಂದಿಗೆ ಹಂಚಿಕೊಂಡಿದ್ದಳು. ವಾರದಲ್ಲಿ ಎರಡು ದಿನವಾದರೂ ಉಚಿತ ಸೇವೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ ಆಸೆ ಈಡೇರುವ ಮುನ್ನವೇ ವಂದನಾ ಹತ್ಯೆಗೀಡಾಗಿದ್ದಳು. ಇದರೊಂದಿಗೆ ಮಗಳ ಸ್ಮರಣೆಯನ್ನು ಜೀವಂತವಾಗಿರಿಸಲು ಚಿಕಿತ್ಸಾ ದೇಗುಲವನ್ನು ನಿರ್ಮಿಸಲು ಪೋಷಕರು ನಿರ್ಧರಿಸಿದರು.

               ಮೇ 10, 2023 ರ ಬೆಳಿಗ್ಗೆ, ಡಾ.ವಂದನಾ ದಾಸ್ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕೊಲೆಯಾಗಿದ್ದಳು. ವೈದ್ಯಕೀಯ ಪರೀಕ್ಷೆಗೆ ಬಂದಿದ್ದ ಆರೋಪಿ ಸಂದೀಪ್ ವಂದನಾ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries