HEALTH TIPS

ಆಕಾಂಕ್ಷಿ ಬ್ಲಾಕ್ ಕಾರ್ಯಕ್ರಮದ ಅಂಗವಾಗಿ ಬುಡಕಟ್ಟು ವೈದ್ಯಕೀಯ ಶಿಬಿರ

            ಕಾಸರಗೋಡು: ಪರಪ್ಪ ಬ್ಲಾಕ್ ಪಂಚಾಯಿತಿಯಲ್ಲಿ ಆಕಾಂಕ್ಷಿ ಬ್ಲಾಕ್ ಕಾರ್ಯಕ್ರಮದ ಅಂಗವಾಗಿ ಸಂಪೂರ್ಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನಕ್ಕೆ ಸಂಬಂಧಿಸಿದಂತೆ ಸಂಜೀವನಿ ಗಿರಿಜನರಿಗಾಗಿ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು.

         ಬ್ಲಾಕ್ ಪಂಚಾಯಿತಿ ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ನಡೆಸಲಾದ ಈ ಶಿಬಿರವನ್ನು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿದರು.  ವೆಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಮೋಹನನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ ಇನ್ಬಾಶೇಖರನ್ ಐ. ಎ. ಎಸ್. ಮುಖ್ಯ ಅತಿಥಿಗಳಾಗಿದ್ದರು. ಈಸ್ಟ್ ಎಳೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ವಕೀಲ ಜೋಸೆಫ್ ಮುಥೋಳಿ, ನ್ಯಾಯ ಆಯೋಗದ ಪ್ರತಿನಿಧಿಗಳಾದ ದೀಪಕ್ ನೈಲ್ ವಾಲ್, ಅಮನ್ ಯಾದವ್, ಉಪ ಯೋಜನಾಧಿಕಾರಿ ಕಲಾಮುದ್ದೀನ್ ಉಪಸ್ಥಿತರಿದ್ದರು. 

            ಜನಪ್ರತಿನಿಧಿಗಳಾದ ರಜಿನಿ ಕೃಷ್ಣನ್, ಎಂ. ಪದ್ಮಾ ಕುಮಾರಿ, ಅನ್ನಮ್ಮಮ್ಯಾಥ್ಯೂ, ಜೋಸ್ ಕುತ್ತಿಯಾತೊಟ್ಟಿಲ್, ಶೋಬಿ ಜೋಸೆಫ್, ಪ್ರಮೋದ್, ಓಮನ, ಜೇಮ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ, ಬ್ಲಾಕ್ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ, ಗಿರಿಜನ ಇಲಾಖೆ ಅಧಿಕಾರಿ, ಪ್ರವರ್ತಕರು ಸೇರಿದಂತೆ 13 ಗ್ರಾ.ಪಂ.ಗಳಿಂದ ಇನ್ನೂರಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ಹೈಪರ್‍ಟೆನ್ಶನ್,  ಉದ್ವಿಗ್ನತೆ, ಮಧುಮೇಹ ಮತ್ತು ರಕ್ತಹೀನತೆ ತಪಾಸಣೆ ಮತ್ತು ಗರ್ಭಿಣಿಯರಿಗಾಗಿ ವಿಶೇಷ ತಪಸಣೆ ಆಯೋಜಿಸಲಾಗಿತ್ತು.

           ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಜೋಸೆಫ್ ಎಂ. ಚಾಕೋ ಸ್ವಾಗತಿಸಿದರು. ವೈದ್ಯಾಧಿಕಾರಿ ಅಲೋಕ್ ಬಿ. ರಾಜ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries