ಬದಿಯಡ್ಕ : ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನಾಲ್ಕನೇ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಅಖಂಡ ಭಜನಾ ಸಂಕೀರ್ತನೆಯಲ್ಲಿ ಮಂಗಳವಾರ ಅಡೂರಿನ ಶ್ರೀಪ್ರಿಯಾ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ತಂಡದಲ್ಲಿ ಪ್ರೇಮಾ ಭಾರಿತ್ತಾಯ, ಪದ್ಮಾ ಭಾರಿತ್ತಾಯ, ಲತಾ ಸರಳಾಯ, ಮನೋರಮಾ ಕೆದಿಲಾಯ, ಜಯಲಕ್ಷಿö್ಮ ತಂತ್ರಿ, ವಿದ್ಯಾ ಹೆಬ್ಬಾರ್, ಚಂಚಲಾ ಸರಳಾಯ, ಸಂಧ್ಯಾ ಕೆದಿಲಾಯ ಭಾಗವಹಿಸಿದ್ದರು. ಹಾರ್ಮೋನಿಯಂನಲ್ಲಿ ಚರಕಂಡ ರಾಧಾಕೃಷ್ಣ ಮೇರ್ಟ ಸಹಕರಿಸಿದ್ದರು. ಭಜನಾರ್ಥಿಗಳನ್ನು ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಫಲ, ಶಾಲು ಹಾಗೂ ಪ್ರಶಂಸಾ ಪತ್ರ ನೀಡಿ ಹರಸಿದರು.