HEALTH TIPS

ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ ಕೋವಿಡ್ ಕಿಟ್‍ನ ಕಮಿಷನ್ ನೀಡಲಾಗುವುದು : ಆಹಾರ ಸಚಿವರಿಂದ ಘೋಷಣೆ

               ತಿರುವನಂತಪುರಂ: ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಕೋವಿಡ್ ಅವಧಿಯಲ್ಲಿ ವಿತರಿಸಲಾದ ಕಿಟ್‍ನ ಕಮಿಷನ್ ಅನ್ನು ಸಂಪೂರ್ಣವಾಗಿ ಪಾವತಿಸಲಾಗುವುದು ಎಂದು ಆಹಾರ ಸಚಿವ ಜಿಆರ್ ಅನಿಲ್ ಘೋಷಿಸಿದ್ದಾರೆ.

             ಇದು ಸೇರಿದಂತೆ ಮುಷ್ಕರಕ್ಕೆ ಆಧಾರವಾಗಿ ಪಡಿತರ ವರ್ತಕರು ಎತ್ತಿರುವ ಬೇಡಿಕೆಗಳ ಬಗ್ಗೆ ಸರ್ಕಾರ ಅನುಕಂಪದ ಧೋರಣೆ ಹೊಂದಿದೆ ಎಂದರು. ಈ ಸಂದರ್ಭದಲ್ಲಿ ಪಡಿತರ ವಿತರಕರ ಸಮನ್ವಯ ರಾಜ್ಯ ಸಮಿತಿ ನೇತೃತ್ವದಲ್ಲಿ ಇದೇ 8 ಮತ್ತು 9ರಂದು ರಾಜ್ಯಾದ್ಯಂತ ಪಡಿತರ ಅಂಗಡಿಗಳನ್ನು ಬಂದ್ ಮಾಡಿ ಮುಷ್ಕರ ಹಿಂಪಡೆಯುವಂತೆ ಆಹಾರ ಸಚಿವರು ಆಗ್ರಹಿಸಿದರು. ವೇತನ ಪ್ಯಾಕೇಜ್ ಪರಿಷ್ಕರಣೆ ಮತ್ತು ಕೆಟಿಪಿಡಿಎಸ್ ಆದೇಶದಲ್ಲಿ ಸಕಾಲಿಕ ಬದಲಾವಣೆಗಳನ್ನು ಮಾಡುವ ಬೇಡಿಕೆಗಳನ್ನು ಸರ್ಕಾರವು ಸಹಾನುಭೂತಿಯಿಂದ ಪರಿಗಣಿಸುತ್ತಿದೆ. ಇದಕ್ಕಾಗಿ ನೇಮಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ವರದಿಯನ್ನು ಪರಿಶೀಲಿಸಿದ ನಂತರ ಪ್ರಾಯೋಗಿಕ ವಿಷಯಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಪಡಿತರ ವರ್ತಕರ ಕಲ್ಯಾಣ ನಿಧಿಯನ್ನು ಬಲಪಡಿಸಬೇಕೆಂಬ ಸಮಿತಿಯ ಬೇಡಿಕೆಗೆ ಸಂಪೂರ್ಣ ಸಹಮತವಿದೆ ಹಾಗೂ ಅದಕ್ಕಾಗಿ ಯೋಜನೆಗಳನ್ನು ರೂಪಿಸಿ ಅನುμÁ್ಠನಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಸಭೆಗೆ ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries