ಬದಿಯಡ್ಕ: ನ್ಯುಮೋನಿಯಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ನಾಲ್ಕರ ಹರೆಯದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ನೀರ್ಚಾಲು ಸನಿಹದ ಪುದುಕ್ಕೋಳಿ ನಿವಾಸಿ,ಜಿಲ್ಲಾ ಲೀಡ್ ಬ್ಯಾಂಕ್ ಉದ್ಯೋಗಿ ಹರೀಶ್ ಹಾಗೂ ಶಿಕ್ಷಕಿ ಕುಸುಮಾ ದಂಪತಿ ಪುತ್ರಿ ಭೂಮಿಕಾ ಸಾವನ್ನಪ್ಪಿದ ಬಾಲಕಿ. ಜ್ವರ ಕಾಣಿಸಿಕೊಂಡ ಬಾಲಕಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಿರಲಿಲ್ಲ.