HEALTH TIPS

ಕೇರಳ ಐ.ಎಸ್. ಮಾಡ್ಯೂಲ್: ಜಹೀರ್ ತುರ್ಕಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

                  ಕೊಚ್ಚಿ: ಕೇರಳ ಐಎಸ್ ಮಾಡ್ಯೂಲ್ ಪ್ರಕರಣದಲ್ಲಿ ಬಂಧಿತನಾಗಿದ್ದ ಜಹೀರ್ ತುರ್ಕಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಇದಕ್ಕೂ ಮುನ್ನ ಎನ್‍ಐಎ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರೂ ಅದು ವಿಫಲವಾಗಿತ್ತು. ಇದರ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿದೆ.

                   ಜಾಮೀನು ಕೇಳಲು ಯಾವುದೇ ಅರ್ಹತೆ ಇಲ್ಲ ಎಂದು ಹೈಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಐಎಸ್ ಕೇರಳದ ಅಮೀರ್ ನಬೀಲ್ ಅಹ್ಮದ್ ಗೆ ಪರಾರಿಯಾಗಲು ಹಾಗೂ ಇತರೆ ಸಹಾಯಕ್ಕೆ ಜಹೀರ್ ಸಹಾಯ ಮಾಡಿದ್ದನ್ನು ಎನ್ ಐಎ ಪತ್ತೆ ಹಚ್ಚಿತ್ತು. ಈತನೇ ಇತರ ಆರೋಪಿಗಳಿಗೆ ಅಡಗುದಾಣಗಳನ್ನು ಸಿದ್ಧಪಡಿಸಿ ಸಿಮ್ ಕಾರ್ಡ್ ಗಳನ್ನು ತೆಗೆದು ಹೋಗಿದ್ದ. ಅವರಿಗೆ ಕೇರಳ ತೊರೆಯಲು ಆರ್ಥಿಕ ನೆರವು ಒದಗಿಸಿದ್ದು ಜಹೀರ್ ಎಂದು ಎನ್‍ಐಎ ನ್ಯಾಯಾಲಯದ ಗಮನಕ್ಕೆ ತಂದಿದೆ.

                 ಮನ್ನಾಕ್ರ್ಕಾಡ್‍ನ ಅಲನಲ್ಲೂರು ಕಟ್ಟುಕುಳಂ ಮೂಲದ ಜಹೀರ್ ತುರ್ಕಿಯನ್ನು ಕಳೆದ ಸೆಪ್ಟೆಂಬರ್‍ನಲ್ಲಿ ಎನ್‍ಐಎ ಬಂಧಿಸಿತ್ತು. ಈತ ಪ್ರಕರಣದಲ್ಲಿ ಬಂಧಿತನಾಗಿದ್ದ ನಬೀಲ್ ಅಹಮದ್ ಸಹಚರನಾಗಿದ್ದ. ಐಎಸ್ ಕೇರಳದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸಿತ್ತು ಮತ್ತು ಹಣ ಸಂಗ್ರಹಿಸಲು ಬ್ಯಾಂಕ್ ದರೋಡೆಗಳನ್ನು ಯೋಜಿಸಿತ್ತು ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ಅವರ ಚಲನವಲನಗಳು ಟೆಲಿಗ್ರಾಂ ಮೂಲಕ ರಹಸ್ಯವಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries