ಮುಳ್ಳೇರಿಯ: ಕಾಡಾನೆ ದಾಳಿಯಿಂದ ದೇಲಂಪಾಡಿ ಪಂಚಾಯಿತಿಯ ಮಯ್ಯಳ ಪ್ರದೇಶದಲ್ಲಿ ವ್ಯಾಪಕ ಕೃಷಿನಾಶವುಂಟಾಗಿದೆ. ಆದೂರು, ಬೋವಿಕ್ಕಾನ ಪ್ರದೇಶದಲ್ಲಿ ಕಂಡುಬರುತ್ತಿದ್ದ ಕಾಡಾನೆಗಳು ಇದೇ ಮೊದಲಬಾರಿಗೆ ಮಯ್ಯಳ ಪ್ರದೇಶಕ್ಕೆ ಲಗ್ಗೆಯಿಟ್ಟಿದೆ.
ಮಯ್ಯಳ ಪ್ರದೇಶದ ಹಲವು ಮಂದಿ ಕೃಷಿಕರ ಅಡಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಕೃಷಿಯನ್ನು ಹಾಳುಗೆಡಹಿದೆ. ಶುಕ್ರವಾರ ನಸುಕಿನ ವೇಳೆಗೆ ಮಯ್ಯಳ ನಿವಾಸಿ ಸದಾನಂದ ಪೂಜಾರಿ ಎಂಬವರ ತೋಟದಿಂದ ಶಬ್ದ ಕೇಳಿ ಬಂದಿದ್ದು, ಬೆಳಗ್ಗೆ ತೋಟಕ್ಕೆ ತೆರಳಿ ನೋಡಿದಾಗ ವ್ಯಾಪಕವಾಗಿ ಕೃಷಿನಾಶ ನಡೆಸಿರುವುದು ಪತ್ತೆಯಾಗಿದೆ. ದೇಲಂಪಾಡಿ ಪಂಚಾಯಿತಿಯ ಇತರ ಪ್ರದೇಶಗಳಲ್ಲಿ ಕಾಡಾನೆ ದಾಳಿಯಿಂದ ವ್ಯಾಪಕ ಕೃಷಿನಾಶಕ್ಕೆ ಕಾರಣವಾಘುತ್ತಿದ್ದು, ಮಯ್ಯಳ ಪ್ರದೇಶಕ್ಕೂ ದಾಳಿಯಿಡಲಾರಂಭಿಸಿದೆ.