ಕುಮಳಿ: ಕುಮಳಿ ಬಳಿ ಕಾರಿಗೆ ಬೆಂಕಿ ತಗುಲಿ ಮೃತಪಟ್ಟ ವ್ಯಕ್ತಿಯನ್ನು ಗುರುತಿಸಲಾಗಿದೆ. ಕುಮಳಿ ಸ್ಪ್ರಿಂಗ್ ವ್ಯಾಲಿಯ ರಾಯ್ ಸೆಬಾಸ್ಟಿಯನ್ (64) ಮೃತರು. ಮೃತದೇಹ ಪೀರುಮೇಡು ತಾಲೂಕು ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ಸೋಮವಾರ ರಾತ್ರಿ 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರು ಬೆಂಕಿ ಹತ್ತಿದ ಬಳಿಕ ಚಲಿಸಿದ ಕಾರಣ ಪಕ್ಕದಲ್ಲಿದ್ದ ಬೈಕ್ಗೂ ಬೆಂಕಿ ಹೊತ್ತಿಕೊಂಡಿದೆ. ರಾಯ್ ಅವರ ಸೀಟ್ ಬೆಲ್ಟ್ ತೆಗೆಯಲು ಸಾಧ್ಯವಾಗದ ಕಾರಣ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಂಬಲಾಗಿದೆ.
ಕೊಟ್ಟಾರಕ್ಕರ-ದಿಂಡುಕಲ್ ಹೆದ್ದಾರಿಯಲ್ಲಿ ಅರವತ್ತಾರನೇ ಮೈಲಿಯಲ್ಲಿ ಕುರಿಶುಪಲ್ಲಿ ಇಳಿಯುವಾಗ ಕಾರಿನಿಂದ ಹೊಗೆ ಬರುತ್ತಿತ್ತು. ಹಿಂದೆ ಬಂದ ಬೈಕ್ ಸವಾರ ಕಾರನ್ನು ಓವರ್ ಟೇಕ್ ಮಾಡಿ ಚಾಲಕನನ್ನು ಕೆಳಗಿಳಿಯಲು ಹೇಳಿದ್ದಾನೆ. ಅಷ್ಟರಲ್ಲಿ ನಿಯಂತ್ರಣ ತಪ್ಪಿದ ಕಾರು ಹೊತ್ತಿ ಉರಿದಿದೆ. ಎದುರಿಗೆ ನಿಂತಿದ್ದ ಬೈಕ್ಗೆ ಕಾರು ನುಗ್ಗಿದಾಗ ಬೈಕ್ ಸವಾರ ಓಡಿ ತಪ್ಪಿಒಸಿಕೊಂಡಿದ್ದಾನೆ.
ಈ ಮಾರ್ಗವಾಗಿ ಬಂದ ಪ್ರಯಾಣಿಕರು ಕಾರಿನೊಳಗಿದ್ದ ವ್ಯಕ್ತಿಯನ್ನು ರಕ್ಷಿಸಲು ಯತ್ನಿಸಿದರಾದರೂ ಆತ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಬೇಗ ಹೊರತರಲು ಸಾಧ್ಯವಾಗಲಿಲ್ಲ. ಅಷ್ಟÀರಲ್ಲಿ ಬೆಂಕಿ ಸಂಪೂರ್ಣ ವ್ಯಾಪಿಸಿ ಹೊತ್ತಿಕೊಂಡು ಜೀವಹಾನಿಗೆ ಕಾರಣವಾಯಿತು. ಕಾರು ಹಾಗೂ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಪೀರುಮೇಡ್ ನಿಂದ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಮೃತದೇಹವನ್ನು ಪೀರುಮೇಡು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಕೊಟ್ಟಾರಕ್ಕರ-ದಿಂಡುಕಲ್ ಹೆದ್ದಾರಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.