HEALTH TIPS

ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕು ಘಟಕ ವಿಶೇಷ ಸಭೆ

       ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕಿನ ವಿಶೇಷ ಸಭೆ ಕಾಸರಗೋಡಿನ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ ಸಭಾಂಗಣದಲ್ಲಿ ಜರುಗಿತು.  ಭಜನಾ ಪರಿಷತ್ ಅಧ್ಯಕ್ಷ ಕೆ.ಎನ್. ವೆಂಕಟರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.    

              ಈ ವರ್ಷದ ಮನೆ ಮನೆ ಭಜನಾ ಕಾರ್ಯಕ್ರಮವನ್ನು ಆರಂಭಿಸುವ ಬಗ್ಗೆ ಭಜನಾ ಸಂಕೀರ್ತನೆಗಾರರಾದ ಹರಿದಾಸರಾದ ಶ್ರೀ ಜಯಾನಂದ ಕುಮಾರ್ ಹೊಸದುರ್ಗ ಅವರು ಮಾಹಿತಿ ನೀಡಿದರು. ಕಾಸರಗೋಡು ತಾಲೂಕಿನ ವಲಯ ಸಮಿತಿ ರಚನೆ ಬಗ್ಗೆ ಚರ್ಚಿಸಲಾಯಿತು. ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಗಸ್ಟ್ ತಿಂಗಳಿನಲ್ಲಿ ಒಂದು ದಿನ ಆಯೋಜಿಸಲಾಗುವ ಭಜನಾ ಕಮ್ಮಟದ ಬಗ್ಗೆ ಚರ್ಚಿಸುವುದರ ಜತೆಗೆ ಕಾಸರಗೋಡು ಭಜನಾ ಪರಿಷತ್ತನ್ನು ತಾಲೂಕಿನಾದ್ಯಂತ ಕ್ರಿಯಾಶೀಲವನ್ನಾಗಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

          ಕೆ.ಟಿ. ಬಾಬಣ್ಣ, ಗುರುಪ್ರಸಾದ್ ಕೋಟೆ ಕಣಿ, ಮೀರಾ ಕಾಮತ್, ಗಣೇಶ ಆಚಾರ್ಯ, ದಿನೇಶ್ ಚೆರುಗೊಳಿ, ಭಜನಾ ಸಂಘದ ಪ್ರತಿನಿಧಿಗಳಾದ ಸವಿತಾ ಭಟ್, ಯಶೋಧಗಟ್ಟಿ, ಪ್ರೇಮಲತಾ, ವನಜಾ ನಂಬಿಯಾರ್, ನಳಿನಾಕ್ಷಿ,, ರೋಹಿತಾಕ್ಷ ಮೊದಲಾದವರು ಉಪಸ್ಥಿತರಿದ್ದರು.  ರೋಹಿತಾಕ್ಷ ಸ್ವಾಗತಿಸಿದರು.  ಮೀರಾ ಕಾಮತ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries