HEALTH TIPS

ಗಾಂಧೀಜಿಯವರ ಶಾಂತಿ, ಅಹಿಂಸಾ ಸಂದೇಶ ಇಂದು ಹೆಚ್ಚು ಪ್ರಸ್ತುತ: ಜೈಶಂಕರ್

           ಟೋಕಿಯೊ: ಜಗತ್ತು ಸಂಘರ್ಷಗಳು ಮತ್ತು ರಕ್ತಪಾತಗಳಿಗೆ ಸಾಕ್ಷಿಯಾಗುತ್ತಿರುವ ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸಾ ಸಂದೇಶ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

         ಇಂದು (ಭಾನುವಾರ) ಟೋಕಿಯೊದ ಎಡೋಗಾವಾದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಿ ಬಳಿಕ ಅವರು ಮಾತನಾಡಿದರು.

             ಕ್ವಾಡ್ ವಿದೇಶಾಂಗ ಸಚಿವರ ಸಭೆಗಾಗಿ ಎರಡು ದಿನಗಳ ಭೇಟಿಗಾಗಿ ಲಾವೋಸ್‌ಗೆ ತೆರಳಿದ್ದ ಅವರು ಇಂದು ಜಪಾನ್‌ಗೆ ಭೇಟಿ ನೀಡಿದ್ದಾರೆ. ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಸಿ.ಬಿ ಜಾರ್ಜ್ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಚಿವರು ಗಾಂಧೀಜಿಯವರ ಕಾಲಾತೀತ ಸಂದೇಶಗಳ ಕುರಿತು ಮಾತನಾಡಿದ್ದಾರೆ.


                 ಜಗತ್ತು ಸಂಘರ್ಷ, ಉದ್ವಿಗ್ನತೆ ಹಾಗೂ ರಕ್ತಪಾತವನ್ನು ನೋಡುತ್ತಿರುವ ಸಮಯದಲ್ಲಿ, ಗಾಂಧೀಜಿಯವರ ಸಂದೇಶಗಳು ಬಹಳ ಮುಖ್ಯ. ಬಾಪು ಅವರ ಸಾಧನೆಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿವೆ ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries