HEALTH TIPS

ರಮೇಶ್ ಶೆಟ್ಟಿ ಬಾಯಾರ್ ರವರಿಗೆ ಕೇರಳ ಪೋಕ್ ಲೋರ್ ಅಕಾಡೆಮಿ ಪುರಸ್ಕಾರ ಪ್ರದಾನ

                    ತಿರುವನಂತಪುರಂ  ಕೇರಳ ಸರ್ಕಾರದ ಪೋಕ್ ಲೋರ್ ಅಕಾಡೆಮಿ(ಜಾನಪದ ಅಕಾಡೆಮಿ)ಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ತಿರುವನಂತಪುರದ ಕೊಟ್ಟಾರಕುನ್ನು ನಿಶಾಗಂಧಿ ಅಡಿಟೋರಿಯಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗೌರವ ಉಪಸ್ಥಿತಿ ಯಲ್ಲಿ ನಡೆಯಿತು.

                ರಾಜ್ಯ ಸಂಸ್ಕøತಿ ಇಲಾಖೆ ಸಚಿವÀ ಸಜಿ ಚೆರಿಯನ್ ಅವರು ಪ್ರಸಿದ್ಧ ಯಕ್ಷಗಾನ ಕಲಾವಿದ  ರಮೇಶ್ ಶೆಟ್ಟಿ ಬಾಯಾರ್ ಅವರಿಗೆ ಪೋಕ್ ಲೋರ್ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದರು.

               ರಮೇಶ್ ಶೆಟ್ಟಿ ಬಾಯಾರ್ ಅವರು ತೆಂಕುತಿಟ್ಟು ಯಕ್ಷಗಾನ ವಲಯದಲ್ಲಿ ಗುರುತಿಸಿಕೊಂಡಿರುವ ಹವ್ಯಾಸಿ ಕಲಾವಿದರಾಗಿದ್ದು, ತರಬೇತಿಯ ಮೂಲಕವೂ ಹಲವಾರು ಶಿಷ್ಯವೃಂದವನ್ನು ಹೊಂದಿದ್ದಾರೆ. ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆ ನಿವಾಸಿಯಾದ ಇವರ ಕಂಸ, ಶಿಶುಪಾಲ, ರಾವಣ, ಕೌರವ ಮೊದಲಾದ ಪಾತ್ರಗಳು ಜನಮನಸೂರೆಗೊಂಡಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries