HEALTH TIPS

ಬೋವಿಕ್ಕಾನ: ಖಾಕಿಯೊಳಗಿನ ಮಾನವೀಯತೆ: ಪ್ರೀತಿಯ ಉಡುಗೊರೆ ನೀಡಿದ ಪೋಲೀಸರು: ಸಮಾಜ ವಿರೋಧಿಗಳು ನಾಶಪಡಿಸಿದ ಪುಸ್ತಕಗಳ ಬದಲಿಗೆ ಹೊಸ ಪುಸ್ತಕಗಳನ್ನು ನೀಡಿದ ಜಿಲ್ಲಾ ಎಸ್.ಪಿ

                     ಕಾಸರಗೋಡು: ಸಮಾಜಘಾತುಕರಿಂದ ಧ್ವಂಸಗೊಂಡ ಪುಸ್ತಕಗಳ ಬದಲಿಗೆ ಹೊಸ ಪುಸ್ತಕಗಳನ್ನು ಉಚಿತವಾಗಿ ನೀಡಿ ಪೋಲೀಸ್ ಅಧಿಕಾರಿಗಳು ಮಾನವೀಯತೆ ಮೆರೆದಿದ್ದು, ಖಾಕಿಯೊಳಗಿನ ಹೃದಯ ವೈಶಾಲ್ಯತೆಯನ್ನು ತೆರೆದಿಟ್ಟರು.

                     ಅಡೂರು ಪೆÇಲೀಸ್ ಠಾಣೆಯ ಅಧಿಕಾರಿಗಳು ಬೋವಿಕ್ಕಾನ ಶಾಲೆಯ ಮಕ್ಕಳಿಗೆ ಪ್ರೀತಿಯ ಉಡುಗೊರೆ ನೀಡಿದರು. ಮಕ್ಕಳಿಗೆ ಪುಸ್ತಕಗಳು ಮತ್ತು ಹೊಸ ಬಳಪಗಳನ್ನು ಉಡುಗೊರೆಯಾಗಿ ನೀಡಲಾಯಿತು.

                    ಪ್ರಕರಣದ ತನಿಖೆಯ ಭಾಗವಾಗಿ ಪೆÇಲೀಸರು ಮೊದಲು ಶಾಲೆಗೆ ಬಂದರು. ಉಡುಗೊರೆಯೊಂದಿಗೆ ಬಂದ ಅಧಿಕಾರಿಗಳು ಪ್ರತಿಯೊಬ್ಬರಿಗೂ ಪುಸ್ತಕಗಳು ಮತ್ತು ಬಳಪಗಳನ್ನು ವಿತರಿಸಿದರು. ಕಳೆದುಹೋದ ಪುಸ್ತಕಗಳ ಬದಲಿಗೆ ಹೊಸ ಪುಸ್ತಕಗಳು ಸಿಗುತ್ತವೆ ಎಂದು ಮಕ್ಕಳು ಸಂತೋಷಪಟ್ರು.  ಪ್ರಕರಣದ ತನಿಖೆಗೆ ಬಂದಾಗ ಅವರತ್ತ ಭಯದಿಂದ ನೋಡಿದ ವಿದ್ಯಾರ್ಥಿಗಳಿಗೆ ಪೋಲೀಸ್ ಅಧಿಕಾರಿಗಳು ಉಡುಗೊರೆ ನೀಡಿ, ಅವರು ಮಕ್ಕಳಿಗೆ ಕಾವಲುಗಾರರಾದರು.

                      ಜಿಲ್ಲಾ ಪೋಲೀಸ್ ವರಿಷ್ಠ ಪಿ.ಬಿಜೋಯ್ ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ರೀತಿ ಮಾಡುತ್ತಿದ್ದೇವೆ. ಕಲಿಕಾ ಸಾಮಗ್ರಿಗಳನ್ನು ಕಳೆದುಕೊಂಡ ಮಕ್ಕಳಿಗೆ ಇದು ನಮ್ಮ ಪ್ರೀತಿಯ ಕಾಣಿಕೆ. ಶಾಲೆಯ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದು ಪೋಲೀಸರು ವಿದ್ಯಾರ್ಥಿಗಳ ಜೊತೆಗಿದ್ದಾರೆ ಎಂಬುದನ್ನು ತೋರಿಸುವುದಾಗಿದೆ ಎಂದರು.

                     ಕಳೆದ ಭಾನುವಾರ ಸಮಾಜ ವಿರೋಧಿಗಳು ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದರು. ಸೋಮವಾರ ಬೆಳಗ್ಗೆ ಶಾಲೆಗೆ ಬಂದ ಮಕ್ಕಳ ಪುಸ್ತಕಗಳು ಸುಟ್ಟು ಹೋಗಿರುವುದು ಕಂಡು ಬಂದಿದೆ. ದಾಳಿಕೋರರು ಪುಸ್ತಕ ಸೇರಿದಂತೆ ಅಧ್ಯಯನ ಸಾಮಗ್ರಿಗಳನ್ನು ಧ್ವಂಸಗೊಳಿಸಿದ್ದರು. ಆರೋಪಿಗಳ ಪತ್ತೆಗೆ ತನಿಖೆ ನಡೆಯುತ್ತಿರುವಾಗಲೇ ಪೋಲೀಸರು ಉಡುಗೊರೆಯೊಂದಿಗೆ ಶಾಲೆಗೆ ಬಂದು ಶ್ಲಾಘನೆಗೊಳಗಾಗಿರುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries