HEALTH TIPS

ರಾಜ್ಯದಲ್ಲಿ ಇಲಿಜ್ವರ ಬಾಧಿಸಿ ಮತ್ತೊಂದು ಸಾವು: ತ್ರಿಶೂರ್ ನ ಜಿಮ್ ಟ್ರೈನರ್ ನಿಧನ

                ತ್ರಿಶೂರ್: ಇಲಿ ಜ್ವರ ಬಾಧಿಸಿ ಚಿಕಿತ್ಸೆ ಪಡೆಯುತ್ತಿದ್ದ ಗುರುವಾಯೂರು ಮಮ್ಮಿಯೂರಿನ ಸುರೇಶ್ ಜಾರ್ಜ್ (62) ಮೃತಪಟ್ಟಿದ್ದಾರೆ. ಸುರೇಶ್ ಜಾರ್ಜ್ ಅವರು ಕೊತ್ತಪಾಡಿ ಜಿಮ್ನಾಷಿಯಂನಲ್ಲಿ ತರಬೇತುದಾರರಾಗಿದ್ದರು ಮತ್ತು ಪರವತ್ತಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು.

                ಕಳೆದ ವಾರ ಸುರೇಶ್ ಅವರಿಗೆ ಇಲಿಜ್ವರ ಇರುವುದು ಪತ್ತೆಯಾಗಿತ್ತು. ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಕೊತ್ತಪಾಡಿಯ ಸೈಂಟ್ ಲಾಜರಸ್ ಚರ್ಚ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

                ರಾಜ್ಯದಲ್ಲಿ ಮತ್ತೆ ಇಲಿ ಜ್ವರ ಹರಡುತ್ತಿದೆ. ಈ ವರ್ಷ ಇದುವರೆಗೆ 2381 ಮಂದಿ ಜನರು ಇಲಿಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ 145 ಮಂದಿ ಸಾವನ್ನಪ್ಪಿದ್ದಾರೆ. ಸರಿಯಾದ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳ ಮೂಲಕ ಮಾತ್ರ ಇಲಿಜ್ವರ ತಡೆಗಟ್ಟಬಹುದು. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವವರು, ಕಸಾಯಿಖಾನೆಗಳ ನೌಕರರು, ಕ್ಲೀನರ್‍ಗಳು ಮತ್ತು ಕೆರೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸ್ನಾನ ಮಾಡುವವರು ಸೋಂಕಿನ ಅಪಾಯವನ್ನು ಎದುರಿಸುತ್ತಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries