ಕಾಸರಗೋಡು: ಅತಿವೃಷ್ಟಿಯಿಂದ ಮನೆ, ಕೃಷಿ ನಾಶನಷ್ಟ ಸಂಭವಿಸಿದವರಿಗೆ ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ಕಾಸರಗೋಡು ಮಂಡಲ ಐಕ್ಯ ರಂಗ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದೆ.
ಭಾರೀ ಗಾಳಿ, ಮಳೆಯಿಂದ ಹಲವು ಮನೆಗಳು, ನೂರಾರು ಎಕರೆ ಕೃಷಿ ನಾಶನಷ್ಟ ಸಂಭವಿಸಿದೆ. ನಾಶನಷ್ಟ ಸಂಭವಿಸಿದವರಿಗೆ ನಷ್ಟ ಪರಿಹಾರ ನೀಡಬೇಕೆಂದು ಐಕ್ಯರಂಗ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಆಗ್ರಹಿಸಿದರು. ಅವರು ಐಕ್ಯರಂಗ ಕಾಸರಗೋಡು ಮಂಡಲ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಎ.ಅಬ್ದುಲ್ ರಹಿಮಾನ್, ಕೆ.ನೀಲಕಂಠನ್, ಶಾಸಕ ಎನ್.ಎ.ನೆಲ್ಲಿಕುನ್ನು, ನ್ಯಾಯವಾದಿ ಗೋವಿಂದನ್ ನಾಯರ್, ಕರಿವೆಳ್ಳೂರು ವಿಜಯನ್, ನ್ಯಾಶನಲ್ ಅಬ್ದುಲ್ಲ, ಪಿ.ಎಂ.ಮುನೀರ್ ಹಾಜಿ, ಎ.ಎಂ.ಕಡವತ್, ಅಬ್ದುಲ್ಲ ಕುಂಞÂ ಚೆರ್ಕಳ, ಆರ್.ಗಂಗಾಧರನ್, ಹಾರೀಸ್ ಚೂರಿ, ಕೆ.ಬಿ.ಕುಂಞõÁಂಮು ಹಾಜಿ, ನಾಸರ್ ಚಾಯಿಂಡಡಿ, ಎಂ.ರಾಜೀವನ್ ನಂಬ್ಯಾರ್, ಟಿ.ಇ.ಮುಕ್ತಾರ್, ಅರ್ಜುನನ್ ತಾಯಲಂಗಾಡಿ, ಎಸ್.ಮುಹಮ್ಮದ್ ಕುಂಞÂ, ನಾಸರ್ ಚೆರ್ಕಳ, ಕಾದರ್ ಮಾನ್ಯ, ಕೆ.ಎಂ.ಬಶೀರ್, ನ್ಯಾಯವಾದಿ ಸಾಜಿದ್ ಕಮ್ಮಾಡಂ, ಅಬ್ದುಲ್ ರಝಾಕ್, ಇಕ್ಬಾಲ್ ಚೇರೂರು, ಅನ್ವರ್ ಚೇರಂಗೈ, ಸುಮಿತ್ರನ್ ಪಿ.ಪಿ, ಎಂ.ಪುರುಷೋತ್ತಮನ್, ಆಲಿ ತುಪ್ಪಕ್ಕಲ್, ಜೋನಿ ಕ್ರಾಸ್ತಾ, ಬಿ.ಟಿ.ಅಬ್ದುಲ್ಲ ಕುಂಞÂ, ಶ್ಯಾಮ್ ಪ್ರಸಾದ್ ಮಾನ್ಯ, ನಾರಾಯಣ ನೀರ್ಚಾಲು, ಅಬ್ಬಾಸ್ ಆಲಿ, ರಾಘವನ್ ಬೇಳೇರಿ, ಮುಹಮ್ಮದ್ ಪಟ್ಟಾಂಗ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಖಾಲಿದ್ ಸ್ವಾಗತಿಸಿದರು. ಟಿ.ಎಂ.ಇಕ್ಬಾಲ್ ವಂದಿಸಿದರು.