HEALTH TIPS

ಇಂದು ಎರಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ

                ತಿರುವನಂತಪುರಂ: ಉತ್ತರ ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು  ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 

                ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಛತ್ತೀಸ್‍ಗಢದ ಮೇಲಿನ ಕಡಮೆ ಒತ್ತಡ, ಉತ್ತರ ಕೇರಳ ಕರಾವಳಿಯಿಂದ ದಕ್ಷಿಣ ಗುಜರಾತ್ ಕರಾವಳಿಯವರೆಗೆ ಕಡಮೆ ಒತ್ತಡದ ಪ್ರದೇಶ ಮತ್ತು ಬಲವಾದ ಮುಂಗಾರು ಮಾರುತಗಳು ಇಡೀ ರಾಜ್ಯದಲ್ಲಿ ಮಳೆಗೆ ಕಾರಣವಾಗಿವೆ. ಇದರೊಂದಿಗೆ ಬಂಗಾಳಕೊಲ್ಲಿಯಲ್ಲಿ ಹೊಸ ಕಡಮೆ ಒತ್ತಡವೂ ರೂಪುಗೊಳ್ಳುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಎರಡು ವಾರಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯೂ ಇದೆ. ಉತ್ತರ ಕೇರಳದಲ್ಲಿ ಮಳೆ ಕೇಂದ್ರೀಕೃತವಾಗಿದೆ.

             ತಗ್ಗು ಪ್ರದೇಶಗಳಲ್ಲಿ ಮಳೆ ತೀವ್ರಗೊಳ್ಳಲಿದೆ. ಮಳೆಯ ಜೊತೆಯಲ್ಲಿ ಭಾರೀ ಗಾಳಿಯೂ ಬೀಸಿದಾಗ ಹಾನಿಯ ಪ್ರಮಾಣ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಕರಾವಳಿ ಪ್ರದೇಶಗಳಿಗೆ ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ. ಸಮುದ್ರ ಪ್ರಕ್ಷುಬ್ದತೆಯ ವಿದ್ಯಮಾನದ ಸಾಧ್ಯತೆಯೂ ಇದೆ. ಇಡುಕ್ಕಿಯ ಕಲ್ಲರ್ಕುಟ್ಟಿ, ತನ್ನಯಾರ್, ಲೋವರ್ ಪೆರಿಯಾರ್ ಮತ್ತು ಕಲ್ಲಾರ್ ಅಣೆಕಟ್ಟುಗಳು ಮತ್ತು ತ್ರಿಶೂರಿನ ಪೆರಿಂಗಲ್ಕುತ್ ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರಿನ ಮಟ್ಟ ಕಂಡುಬಂದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಬಾ, ಮಣಿಮಾಲಾ, ಅಚನ್ ಕೋವಿಲ್ ನದಿಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಗುಡ್ಡಗಾಡು ಪ್ರವಾಸಿ ತಾಣಗಳು ಮತ್ತು ಕಡಲತೀರಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

            ಭಾರೀ ಮಳೆಯಿಂದಾಗಿ ಹಲವು ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯ ಪ್ರವಾಸಿ ಕೇಂದ್ರಗಳಾದ ಇಲವೀಜಪೂಂಚಿರಾ, ಇಲ್ಲಿಕಲ್ ಕಲ್ಲ್ ಮತ್ತು ಮರ್ಮಲ ಅರುವಿಯನ್ನು ಜುಲೈ 18ರವರೆಗೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ. ವಿಘ್ನೇಶ್ವರಿ ಮಾಹಿತಿ ನೀಡಿದರು. ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 14 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. 76 ಕುಟುಂಬಗಳ 224 ಜನರನ್ನು ಸ್ಥಳಾಂತರಿಸಲಾಗಿದೆ. ಎರಡು ದಿನಗಳಲ್ಲಿ 98 ಮನೆಗಳು ಹಾನಿಗೊಳಗಾಗಿವೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries