HEALTH TIPS

ಸಂಗೀತದ ಮೂಲಕ ಸಂಸ್ಕಾರವಂತರಾಗಲು ಸಾಧ್ಯ : ಕೆ.ಜಿ ಶ್ಯಾನುಭೋಗ್

          ಕಾಸರಗೋಡು: ಸಂಗೀತವನ್ನು ಅಭ್ಯಾಸ ಮಾಡುವಮೂಲಕ ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯ, ಶ್ರುತಿ, ತಾಳ, ಲಯಬದ್ದವಾಗಿ ಸಂಗೀತವನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅದನ್ನೇ ನಮ್ಮ ಜೀವನದಲ್ಲಿ ಅಳವಡಿಸಿದಾಗ ನಾವು ಸಭ್ಯರಾಗಿ ಬದುಕಬಹುದು ಎಂದು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವ್ಯವಸ್ಥಾಪಕರೂ ಗಾಯಕರೂ ಆದ ಕೆ.ಜಿ ಶ್ಯಾನುಭೋಗ್ ಅಭಿಪ್ರಾಯಪಟ್ಟರು. 

         ಅವರು ಮೇಘರಂಜನ ಚಂದ್ರಗಿರಿ ಇವರ ನೇತೃತ್ವದಲ್ಲಿ ಜರಗಿದ ಭಾವ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

         ಭಾವಗೀತೆಯ ಮೂಲಕ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು ಅದರಿಂದ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸಬಹುದು ಎಂದು ಹೇಳಿದರು. ಸಮಾರಂಭದ ಮುಖ್ಯಅತಿಥಿಯಾದ ರಂಗಚಿನ್ನಾರಿ ನಿರ್ಧೇಶಕ ಕಾಸರಗೋಡು ಚಿನ್ನಾ ಮಾತನಾಡಿ ಕಲಾಗ್ರಾಮವಾದ ಕೂಡ್ಲಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಮತ್ತು ಉದಯೋನ್ಮಖ ಕಲಾವಿದರ  ಸೃಷ್ಟಿ ಆಗಬೇಕು ಎಂದು ಹೇಳಿದರು. 

         ಅಧ್ಯಕ್ಷತೆ ವಹಿಸಿದ್ದ ಮೇಘರಂಜನ ಚಂದ್ರಗಿರಿಯ ನಿರ್ಧೇಶಕರಾದ ಪುರುಷೋತ್ತಮ ಕೊಪ್ಪಲ್ ಮಾತನಾಡಿ ಇಂತಹ ಶಿಬಿರಗಳಮೂಲಕ ಮಕ್ಕಳಿಗೆ ವೇದಿಕೆ ಸೃಷ್ಟಿಸುವಲ್ಲಿ ಮೇಘರಂಜನ ಚಂದ್ರಗಿರಿ ಪ್ರಯತ್ನಿಸಲಿದೆ ಎಂದು ಹೇಳೀದರು. ಖ್ಯಾತ ಹಾಡುಗಾರ ಕಿಶೋರ್ ಕುಮಾರ್ ಪೆರ್ಲ, ಪ್ರಭಾಕರ್, ಸವಿತಾ ಟೀಚರ್ ಕೂಡ್ಲು ಸಮಾರಂಭಕ್ಕೆ ಶುಭಹಾರೈಸಿದರು. ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ ವಂದಿಸಿದರು. ಬಳಿಕ ಕೂಡ್ಲು ಪ್ರೌಢಶಾಲೆಯ ಆಯ್ದ ಮಕ್ಕಳಗೆ ನಾಡಗೀತೆ ಹಾಗು ಭಾವಗೀತೆಗಳನ್ನು ಖ್ಯಾತ ಹಾಡುಗಾರ ಕಿಶೋರ್ ಕುಮಾರ್ ಪೆರ್ಲ ಕಲಿಸಿಕೊಟ್ಟರು. ಪ್ರಭಾಕರ್, ಸವಿತಾ ಟೀಚರ್ ಉಷ ಟೀಚರ್ ಸಹಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries