ಕಾಸರಗೋಡು: ಜಿಲ್ಲಾ ಮಾಹಿತಿ ಕಛೇರಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ವಾಚನಾ ಪಕ್ಷಾಚರಣೆಯ ಭಾಗವಾಗಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ವಾಚನ ಅನುಭವ ಟಿಪ್ಪಣಿ ಸ್ಪರ್ಧೆಯ ವಿಜೇತರನ್ನು ಪ್ರಕಟಿಸಲಾಯಿತು.
ಯುಪಿ ವಿಭಾಗದಲ್ಲಿ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕೆ.ಆರಾಧ್ಯ ಪ್ರಶಾಂತ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಡುಮೇನಿ ಎಸ್ಎನ್ಡಿಪಿ ಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಿಸ ಫಾತಿಮಾ ಹಾಗೂ ನೀಲೇಶ್ವರಂ ಜಿಯುಪಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಶಿವದಾ ಕೂಕ್ಕಲ್ ದ್ವಿತೀಯ ಸ್ಥಾನ ಪಡೆದರು. ಕಡುಮೇನಿ ಎಸ್ಎನ್ಡಿಪಿ ಯುಪಿ ಶಾಲೆಯ ದಿಯಾ ಸುಜಯ್ ತೃತೀಯ ಸ್ಥಾನ ಪಡೆದರು.
ಶೇಣಿ ಶ್ರೀ ಶಾರದಾಂಭಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ ಶೆಟ್ಟಿ ಪ್ರೋತ್ಸಾಹಕ ಬಹುಮಾನಕ್ಕೆ ಅರ್ಹರಾದರು.
ಪ್ರೌಢಶಾಲಾ ವಿಭಾಗದಲ್ಲಿ ಕೋಳತ್ತೂರ್ ಸರ್ಕಾರಿ ಪ್ರೌಢಶಾಲೆ ಯ 10 ನೇ ತರಗತಿಯ ವಿದ್ಯಾರ್ಥಿನಿಯರಾದ ಸಿ ಕೆ ಶ್ರಿಶ್ಮ ಪ್ರಥಮ ಸ್ಥಾನವನ್ನು ಪಾಕಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಪಿ ಸಾಯಿ ಗಾಯತ್ರೀ ದ್ವಿತೀಯ ಸ್ಥಾನವನ್ನು, ಕೊಡ್ಯಮೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಅರಿಯಮ್ಮತ್ ಶಕೀರಾ ತೃತೀಯ ಸ್ಥಾನವನ್ನು ಗಳಿಸಿದರು.
ಪ್ರೋತ್ಸಾಹಕ ಬಹುಮಾನಕ್ಕೆ ಪೆರ್ಲ ಎಸ್ ಎನ್ ಎಚ್ ಎಸ್ 9 ನೇ ತರಗತಿಯ ವಿದ್ಯಾರ್ಥಿನಿಯಾದ ಡಿ. ವಿಸ್ಮಿತ ಅರ್ಹರಾದರು.
ವಿಜೇತರಿಗೆ ಜುಲೈ 4 ರಂದು ಮಧ್ಯಾಹ್ನ 2: ಗಂಟೆಗೆ ಕಾಞಂಗಾಡ್ - ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಬಷೀರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸುಪ್ರಸಿದ್ಧ ಲೇಖಕನಾದ ಅಂಬಿಕಾಸುತನ್ ಮಾಂಙಡ್ ಬಹುಮಾನ ವಿತರಣೆ ನಡೆಸಲಿದ್ದಾರೆ. ವಿಜೇತ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಬಂದು ಬಹುಮಾನವನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.