ಪೆರ್ಲ: ಪಳ್ಳತ್ತಡ್ಕದ ಸಾಂದೀಪನಿ ಯೋಗಕೇಂದ್ರದ ಆಶ್ರಯದಲ್ಲಿ ಮೂರು ದಿನಗಳ ಯೋಗ ತರಬೇತಿ ಶಿಬಿರ ಪೆರ್ಲ ಶಂಕರ ಸದನದಲ್ಲಿ ಆರಂಭಗೊಂಡಿತು.
ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಶಿಬಿರ ಉದ್ಘಾಟಿಸಿ, ಮಾತನಾಡಿ ಇಂದಿನ ಮಾರಕ ರೋಗಗಳಿಂದ ಮನನೊಂದಿರುವ ಜನರಲ್ಲಿ ಆತ್ಮವಿಶ್ವಾಸವನ್ನು ಕಂಡುಕೊಳ್ಳಲು ಯೋಗ ಸೂಕ್ತ ಮಾರ್ಗ. ಪ್ರತಿನಿತ್ಯ ಯೋಗಾಸನ, ಪ್ರಾಣಾಯಾಮ, ಧ್ಯಾನ ಮತ್ತು ಹಿತಮಿತ ಆಹಾರ ಸೇವನೆಯಿಂದ ಸುಸ್ಥಿರ ಜಿವನ ನಮ್ಮದಾಗಿಸಲು ಸಾಧ್ಯ. ಕುಟುಂಬಜೀವನಕ್ಕೆ ಬೇಕಾದ ಸಹಕಾರ, ನಂಬಿಕೆ, ಆತ್ಮವಿಶ್ವಾಸವನ್ನು ಹೆಚ್ಚಿಸಿ ಉನ್ನತಿಯನ್ನು ಸಾಧಿಸಾಲು ಯೋಗಸಾಧನೆಯಿಂದ ಸಾಧ್ಯ ಎಂದು ತಿಳಿಸಿದರು.
ಯೋಗಶಿಕ್ಷಕಿ ದಿವ್ಯಾ ಶರ್ಮ ಪಳ್ಳತ್ತಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಂದಿನ ದಿನಗಳಲ್ಲಿ ಪ್ರತೀ ಸೋಮವಾರದಂದು ಸಂಜೆ ಯೋಗತರಬೇತಿಯನ್ನು ನಡೆಸಲು ತೀರ್ಮಾನಿಸಲಾಯಿತು.