HEALTH TIPS

ಯಾಂತ್ರಿಕ ತಕರಾರು-ಸಮುದ್ರ ಮಧ್ಯೆ ಸಿಲುಕಿಕೊಂಡಿದ್ದ ೧೯ ಮಂದಿ ಮೀನುಗಾರರ ರಕ್ಷಣೆ

                    ಕಾಸರಗೋಡು: ನಾಡದೋಣಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಯಾಂತ್ರಿಕ ತಕರಾರು ಕಾಣಿಸಿಕೊಂಡ ಪರಿಣಾಮ ಸಮುದ್ರಮಧ್ಯೆ ಸಿಲುಕಿದ ೧೯ಮಂದಿ ಮೀನುಕಾರ್ಮಿಕರನ್ನು ಕಾಸರಗೋಡು ಮೆರೈನ್ ಎನ್‌ಫೋರ್ಸ್ಮೆಂಟ್  ತಂಡ ರಕ್ಷಿಸಿದೆ.

                ಚೆರ್ವತ್ತೂರು ಅಳಿವೆ ಮೂಲಕ ೧೯ಮಂದಿ ಕಾರ್ಮಿಕರ ತಂಡ ಮೀನುಗಾರಿಕೆಗೆ ತೆರಳಿದ್ದು, ಮಾಹಿಯಿಂದ ಹತ್ತು ಕಿ.ಮೀ ದೂರ ಸಂಚರಿಸಿದಾಗ ದೋಣಿಯ ಯಂತ್ರದಲ್ಲಿ ತಕರಾರು ಕಾಣಿಸಿಕೊಂಡಿದೆ. ಬಿರುಸಿನ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮೀನುಕಾರ್ಮಿಕರು ಕಾಸರಗೋಡಿನ ನಿಯಂತ್ರಣಕೊಠಡಿಗೆ ಮಾಹಿತಿ ನೀಡಿದ್ದರು. ಮೆರೈನ್ ಇಲಾಖೆ ಸಹಾಯಕ ನಿರ್ದೇಶಕಿ ಪಿ.ವಿ ಪ್ರೀತಾ ಅವರ ನಿರ್ದೇಶನದ ಮೇರೆಗೆ ಮೆರೈನ್ ರೆಸ್ಕೂö್ಯ ಯೂನಿಟ್ ಬೋಟಿನಲ್ಲಿ ತೆರಳಿ, ದೋಣಿಯಲ್ಲಿ ಸಿಲುಕಿಕೊಂಡಿದ್ದ ಎಲ್ಲ ೧೯ಮಂದಿಯನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ. ದೋಣಿಯನ್ನೂ ದಡ ತಲುಪಿಸಲಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries