HEALTH TIPS

ಬಜೆಟ್​​ನಲ್ಲಿ ಈ ವಿಷಯವೊಂದೆ ಸ್ವಾಗತರ್ಹ: ಶಶಿ ತರೂರ್ ಹೇಳಿದ ವಿಚಾರ ಇದೇ ನೋಡಿ

             ವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಹಣಕಾಸು ವರ್ಷಕ್ಕೆ ತಮ್ಮ ಸತತ ಏಳನೇ ಬಜೆಟ್​​ ಅನ್ನು ಮಂಗಳವಾರ(ಜುಲೈ 23) ಮಂಡಿಸಿದರು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಕಾಪಿ ಪೇಸ್ಟ್​​ ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

           ಇದೊಂದು ದುರ್ಬಲ ಬಜೆಟ್​ ಆಗಿದ್ದು, ಇದರಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಏನನ್ನೂ ಕೇಳಲಿಲ್ಲ. ಮನರೇಗಾ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಮತ್ತು ಸಾಮಾನ್ಯ ವ್ಯಕ್ತಿಯ ಆದಾಯವನ್ನು ಸುಧಾರಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾಕಷ್ಟು ಉಲ್ಲೇಖವಿಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆ ಕೇವಲ ಸುಳಿವು ನೀಡಲಾಗಿದೆ ಎಂದು ಹೇಳಿದರು.

            ಬಜೆಟ್​ನಲ್ಲಿ ನಾನು ಸ್ವಾಗತಿಸಬಹುದಾದ ಏಕೈಕ ವಿಷಯವೆಂದರೆ ಅದರು ಏಂಜೆಲ್​ ಹೂಡಿಕೆದಾರರ ಮೇಲಿನ ತೆರಿಗೆಯನ್ನು ರದ್ದುಗೊಳಿಸಿರುವುದು. ನಾನು ಇದನ್ನು 5 ವರ್ಷಗಳ ಹಿಂದೆ ಅರುಣ್ ಜೇಟ್ಲಿ ಅವರಿಗೆ ಶಿಫಾರಸು ಮಾಡಿದ್ದೆ ಎಂದು ಶಶಿ ತರೂರ್​ ಹೇಳಿದ್ದಾರೆ.

            ಬಜೆಟ್ 2024 ಭಾಷಣದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ಭಾರತೀಯ ಸ್ಟಾರ್ಟ್​​ಅಪ್​​ ವ್ಯವಸ್ಥೆಯನ್ನು ಉತ್ತೇಜಿಸಲು, ಉದ್ಯಮಶೀಲತಾ ಮನೋಭಾವವನ್ನು ಹೆಚ್ಚಿಸಲು ಮತ್ತು ನಾವೀನ್ಯತೆಗಳನ್ನು ಬೆಂಬಲಿಸಲು, ಎಲ್ಲಾ ವರ್ಗದ ಹೂಡಿಕೆದಾರರಿಗೆ ಏಂಜಲ್ ತೆರಿಗೆ ಎಂದು ಕರೆಯಲ್ಪಡುವುದನ್ನು ರದ್ದುಗೊಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries