HEALTH TIPS

ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾದ ಮಗು-ತಾಯಿಯ ಬಂಧನ

                ಮುಳ್ಳೇರಿಯ: ಆದೂರು ಪೆÇಲೀಸ್ ಠಾಣಾ ವ್ಯಾಪ್ತಿಯ ಪಂಜಿಕಲ್ಲು ಶಾಲಾ ವಠಾರದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಘಟನೆಗೆ ಸಂಬಂಧಿಸಿದಂತೆ ಆದೂರು ಪೆÇಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.  ಮಗುವನ್ನು ಬಿಟ್ಟು ಹೋಗಿರುವ ಶಾಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಆರೋಪಿ ಮಹಿಳೆಯನ್ನು ಕರೆದೊಯ್ದ ಪೆÇಲೀಸ್ ತಂಡ  ಮಾಹಿತಿ ಸಂಗ್ರಹಿಸಿದೆ.

              ಎಸ್‍ಎಚ್‍ಒ ಇನ್‍ಸ್ಪೆಕ್ಟರ್ ಸುನು ಮೊಂಟೆ ನೇತೃತ್ವದ ಪೆÇಲೀಸ್ ತಂಡದಲ್ಲಿ ಸಬ್ ಇನ್‍ಸ್ಪೆಕ್ಟರ್‍ಗಳಾದ ಅನುರೂಪ್ ಮತ್ತು ವಿನೋದ್ ಕುಮಾರ್, ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಅನೀಶ್ ವರ್ಗೀಸ್ ಮತ್ತು ಸಿವಿಲ್ ಪೆÇಲೀಸ್ ಅಧಿಕಾರಿ ರಮ್ಯಾ ಇದ್ದರು. ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಗುವಿನ ಸ್ಥಿತಿ ಗಂಭೀರಾವಸ್ಥೆಯಲ್ಲಿದ್ದು,  ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries