HEALTH TIPS

ಎಂಡೋಸಲ್ಫಾನ್ ಪುನರ್ವಸತಿ ಮೊದಲ ಹಂತ ಪೂರ್ಣ: ಮುಳಿಯಾರ್ ನ ಸಹಜೀವನಂ ಸ್ನೇಹಗ್ರಾಮದಲ್ಲಿ ಸಾಂತ್ವನ ನೆರವು ಪಡೆಯಲು ಆಗಮಿಸಿದ ಸಂತ್ರಸ್ಥ ತಂಡ

              ಮುಳ್ಳೇರಿಯ: ಎಂಡೋಸಲ್ಫಾನ್ ಸಂತ್ರಸ್ತರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಇಲಾಖೆ ಮುಳಿಯಾರಿನಲ್ಲಿ ಆರಂಭಿಸಿರುವ ಸಹಜೀವನಂ ಸ್ನೇಹ ಗ್ರಾಮಕ್ಕೆ ಮೊದಲ ದಿನ 20 ಮಕ್ಕಳು ಸೇವೆಯನ್ನು ಕೋರಿದರು. ಎಂಸಿಆರ್ ಸಿ ಶಿಕ್ಷಕರು ಮಕ್ಕಳನ್ನು ಕೈ ಹಿಡಿದು ಸ್ನೇಹಗ್ರಾಮಕ್ಕೆ ಕರೆತಂದರು. ಫಿಸಿಯೋಥೆರಪಿ, ಕ್ಲಿನಿಕಲ್ ಸೈಕಾಲಜಿ ಮತ್ತು ಸ್ಪೀಚ್ ಥೆರಪಿಯಂತಹ ಸೇವೆಗಳೊಂದಿಗೆ ಸ್ನೇಹಗ್ರಾಮ ಸೋಮವಾರ ಪ್ರಾರಂಭವಾಯಿತು.

               ನಿಷ್ಮಾರ್ ನ ತಜ್ಞರು ಪ್ರತಿ ಸೋಮವಾರ ಅಭಿವೃದ್ಧಿ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಾರೆ. ಎಲ್ಲಾ ನೋಂದಾಯಿತ ಮಕ್ಕಳಿಗೆ ನಿರ್ದಿಷ್ಟವಾಗಿ ಅಗತ್ಯವಿರುವ ಪಟ್ಟಿ ಮಾಡಲಾದ ಸೇವೆಗಳು ಮತ್ತು ಚಿಕಿತ್ಸೆಗಳು ಲಭಿಸಲಿದೆ. ಮುಂದಿನ ದಿನಗಳಲ್ಲಿ, ಪ್ರತಿ ಮಗುವಿಗೆ ಅಗತ್ಯ ಚಿಕಿತ್ಸೆಗಳು ಮತ್ತು ನೆರವು ಲಭಿಸಲಿದೆ. ಸ್ನೇಹಗ್ರಾಮ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿದೆ. ಸೇವೆಯ ಅಗತ್ಯವಿರುವ ಮಕ್ಕಳು ಈ ಸಮಯದಲ್ಲಿ ಸ್ನೇಹಗ್ರಾಮವನ್ನು ತಲುಪಬಹುದು ಮತ್ತು ಚಿಕಿತ್ಸಾ ಸೌಲಭ್ಯವನ್ನು ಬಳಸಿಕೊಂಡು ಹಿಂತಿರುಗಬಹುದು.

                 ಮೇ 2022 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿದ ಪುನರ್ವಸತಿ ಗ್ರಾಮ ಯೋಜನೆ 489,52,829 ರೂ. ಅಂದಾಜು ವೆಚ್ಚ ಮತ್ತು 445,000 ರೂ. ತಾಂತ್ರಿಕ ಅನುಮತಿ ಲಭಿಸಿತ್ತು.  ಉರಾಲುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿಯಿಂದ ನಿರ್ಮಾಣವನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ. ಮೊದಲ ಹಂತವು ನಾಲ್ಕು ಪ್ರಮುಖ ಘಟಕಗಳನ್ನು ಒಳಗೊಂಡಿದೆ ಮತ್ತು ಸರ್ಕಾರ ಘೋಷಿಸಿದ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕೆ 25 ಎಕರೆ ಭೂಮಿ ಲಭ್ಯವಾಗಿದೆ. ಇದರ ಮೊದಲ ಹಂತವು ಹೈಡ್ರೋ ಥೆರಪಿ ಮತ್ತು ಕ್ಲಿನಿಕಲ್ ಸೈಕಾಲಜಿ ಬ್ಲಾಕ್ ಅನ್ನು ಒಳಗೊಳ್ಳುವ ಮೂಲಕ ಪೂರ್ಣಗೊಂಡಿತು.

             ಮುಳಿಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್ ಮತ್ತಿತರರು ಸಹಜೀವನಂ ಸ್ನೇಹ ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಚಟುವಟಿಕೆಗಳ ಮೌಲ್ಯಮಾಪನ ನಡೆಸಿದರು. ಎಂಡೋಸಲ್ಫಾನ್ ಪೀಡಿತರಿಗೆ ಸಹಜೀವನಂ ಸ್ನೇಹ ಗ್ರಾಮದಲ್ಲಿ ಪ್ರತಿದಿನ ಉಚಿತ ಚಿಕಿತ್ಸೆ ದೊರೆಯಲಿದೆ. ಕಳೆದ ಫೆಬ್ರವರಿಯಲ್ಲಿ ಸಹಜೀವನಂ ಸ್ನೇಹಗ್ರಾಮವನ್ನು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ.ಆರ್.ಬಿಂದು ಉದ್ಘಾಟಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries