HEALTH TIPS

ಕಾಸರಗೋಡು ಟೌನ್ ಬ್ಯಾಂಕ್ ನವೀಕೃತ ಕೇಂದ್ರ ಕಚೇರಿ ಉದ್ಘಾಟನೆ

 

            ಕಾಸರಗೋಡು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಕಾಸರಗೋಡು ಸಹಕಾರಿ ಟೌನ್ ಬ್ಯಾಂಕ್‍ನ ನವೀಕೃತ ಕೇಂದ್ರ ಕಚೇರಿ ಕಟ್ಟಡವನ್ನು ಕೇಂದ್ರ ಪಶು ಸಂಗೋಪನೆ, ಮೀನುಗಾರಿಕೆ ಖಾತೆ ಸಹಾಯಕ ಸಚಿವ ಜಾರ್ಜ್ ಕುರಿಯನ್ ಉದ್ಘಾಟಿಸಿದರು. 

           ಬ್ಯಾಂಕ್ ಅಧ್ಯಕ್ಷ ವಕೀಲ ಎ.ಸಿ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಯಾಘಿ ಭಾಗವಹಿಸಿದ್ದರು.  ಆರೆಸ್ಸೆಸ್ ಜಿಲ್ಲಾ ಕರ್ಯವಾಹ ಪ್ರಭಾಕರನ್ ಮಸ್ಟರ್, ಕಾಞಂಗಾಡು ಜಿಲ್ಲಾ ಸಂಘ ಚಾಲಕ್ ದಾಮೋದರನ್, ಸಹಕಾರಿ ಸಂಘ ಇನ್ಸ್‍ಪೆಕ್ಟರ್ ಮಣಿಕಂಠನ್, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಕೃಷಿ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷ ಕಣ್ಣನ್, ಕಾಸರಗೋಡು ನಗರಸಭಾ ಸದಸ್ಯೆ ಎಂ. ಶ್ರೀಲತಾ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತಪ್ಪ ಮವ್ವಾರ್, ಟೌನ್ ಬ್ಯಾಂಕ್ ಎಂಪ್ಲೋಯೀಸ್ ಸಂಘ್ ಅಧ್ಯಕ್ಷ ಪಿ. ಮುರಳೀಧರನ್, ನಿರ್ದೇಶಕ ವಕೀಲ ಕರುಣಾಕರನ್ ನಂಬ್ಯಾರ್, ಪ್ರಮಿಳಾ ಸಿ.ನಾಯ್ಕ್, ವಿ. ಬಾಲಕೃಷ್ಣ ಶೆಟ್ಟಿ, ವಕೀಲ ಎ. ಅಶೋಕ್ ಕುಮಾರ್, ಪಿ. ರಮೇಶ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸುಧಾಮ ಗೋಸಾಡ ಮೊದಲಾದವರು  ಉಪಸ್ಥಿತರಿದ್ದರು. ಬ್ಯಾಂಕ್ ಉಪಾಧ್ಯಕ್ಷ ಕೆ. ಮಾಧವ ಹೇರಳ ಸ್ವಾಗತಿಸಿದರು. ಸಿಇಓ ಆರ್. ಸಉರೇಶ್ ಕುಮಾರ್ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries