HEALTH TIPS

ರಾಜಸ್ಥಾನ: ವಲಸಿಗರ ಪೌರತ್ವಕ್ಕೆ 'ವಿಶೇಷ ಶಿಬಿರ'

           ಜೈಪುರ: ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸಂಬಂಧ ರಾಜಸ್ಥಾನ ಸರ್ಕಾರ ವಿಶೇಷ ಶಿಬಿರ ಆಯೋಜಿಸಲಿದೆ ಎಂದು ಆರೋಗ್ಯ ಸಚಿವ ಗಜೇಂದ್ರ ಸಿಂಗ್‌ ಗುರುವಾರ ತಿಳಿಸಿದ್ದಾರೆ.

         ರಾಜಸ್ಥಾನದ ವಿಧಾನಸಭೆಯಲ್ಲಿ ಗೃಹ ಸಚಿವರ ಪರವಾಗಿ ಈ ಮಾಹಿತಿ ನೀಡಿರುವ ಅವರು, ವಲಸಿಗರಿಗೆ ತ್ವರಿತವಾಗಿ ಪೌರತ್ವ ನೀಡಲು ರಾಜ್ಯ ಸರ್ಕಾರವು ಹೆಚ್ಚಿನ ಒತ್ತು ನೀಡುತ್ತಿದೆ.

           ಈ ಸಂಬಂಧ ನಿಯಮಗಳು ಹಾಗೂ ಕಾರ್ಯ ವಿಧಾನಗಳನ್ನು ಸರಳೀಕರಣಗೊಳಿಸಲಾಗಿದೆ. ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ವಿಶೇಷ ಶಿಬಿರ ನಡೆಸಿ, ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

              2016 ರಿಂದ ಈವರೆಗೆ 2,329 ವಲಸಿಗರಿಗೆ ಭಾರತದ ಪೌರತ್ವ ಕಲ್ಪಿಸಲಾಗಿದೆ. ಸದ್ಯ 1,566 ಅರ್ಜಿಗಳು ಬಾಕಿ ಉಳಿದಿದ್ದು, ಈ ಪೈಕಿ 300 ಅರ್ಜಿದಾರರ ಬಗ್ಗೆ ಗುಪ್ತಚರ ಇಲಾಖೆಯ ವರದಿ ಇನ್ನಷ್ಟೆ ಕೈಸೇರಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries