ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ನ 2024-2029ನೇ ಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿಯ ಎಲ್ಲ ಹನ್ನೊಂದು ಮಂದಿ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಕಾಂಗ್ರೆಸ್, ಸಿಪಿಎಂ, ಸಿಪಿಐ, ಮುಸ್ಲಿಂಲೀಗ್, ಜನತಾದಳ ಒಳಗೊಂಡ ಪಕ್ಷಗಳ ಐಎನ್ಡಿಐಎ ಒಕ್ಕೂಟದ ಪ್ರಬಲ ಪೈಪೋಟಿಯ ಮಧ್ಯೆ ಸಹಕಾರ ಭಾರತಿಯ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಹಕಾರ ಭಾರತಿಯ ಐತ್ತಪ್ಪ, ದಿನೇಶ, ರಾಧಾಕೃಷ್ಣ ರೈ, ರಮೇಶ್ ಎಂ.ಶೆಟ್ಟಿ, ಸುಜಿತ್ ರೈ, ಮಹಿಳಾ ವಿಭಾಗದಿಂದ ಉಮಾಲತಾ, ಉಷಾಕುಮಾರಿ, ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ವಿಭಾಗದಿಂದ ಶಂಕರ, 40ವರ್ಷಕ್ಕಿಂತ ಕೆಳಗಿನ ಹರೆಯದ ಪುರುಷ ವಿಭಾಗದಿಂದ ಪ್ರಕಾಸ್ ಕುಮರ್, 40ವರ್ಷಕ್ಕಿಂತ ಕೆಳಗಿನ ಮಹಿಳಾ ವಿಭಾಗದಿಂದ ರಚನಾ ಹಾಗೂ ಠೇವಣಾತಿ ವಿಭಾಗದಿಂದ ಮಧುಸೂಧನ ಅವರು ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿಯ ಅಭ್ಯರ್ಥಿಗಳಿಗೆ 1512 ಮತಗಳು ಲಭಿಸಿದ್ದರೆ, ಇಂಡಿಯಾ ಒಕ್ಕೂಟಕ್ಕೆ ಕೇವಲ 590ಮತಗಳು ಲಭಿಸಿತ್ತು.