ಕಾಸರಗೋಡು: ಹೂವಿನ ಹಬ್ಬ ಓಣಂಗೆ ಹೂವಿನಲ್ಲಿ ಸ್ವಾವಲಂಬಿಗಳಾಗಲು ಕಾಞಂಗಾಡಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ಪೆÇಲೀಸ್ ಕೆಡೆಟ್ಗಳು ಶಾಲಾ ವಠಾರದಲ್ಲಿ ಚೆಂಡುಮಲ್ಲಿಗೆ ಹೂವಿನ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸ್ವಾವಲಂಬಿ ಹಾಗೂ ಸುಸ್ಥಿರ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂಬರುವ ಓಣಂ ಹಬ್ಬದ ಆಚರಣೆಯಲ್ಲಿ ಚೆಂಡುಮಲ್ಲಿಗೆ ಹೂಗಳನ್ನು ಸ್ವಂತ ಬಳಕೆ ಜತೆಗೆ ಇತರರಿಗೆ ವಿತರಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಈ ಸಾಹಸಕ್ಕೆ ಕೈಹಾಕಿದ್ದಾರೆ. ವಿದ್ಯಾರ್ಥಿ ಪೆÇಲೀಸ್ ಕೆಡೆಟ್ಗಳು ಶಾಲಾ ಆವರಣದಲ್ಲಿ ಚೆಂಡುಮಲ್ಲಿಗೆ ಸಸಿಗಳನ್ನು ನೆಡುವ ಮೂಲಕ ಚೆಂಡುಮಲ್ಲಿಗೆ ಕೃಷಿಗೆ ಚಾಲನೆ ನೀಡಿದರು. ಕಾಸರಗೋಡು ಕುಟುಂಬಶ್ರೀ ಮಿಷನ್ ಫಾರ್ಮ್ ಲೈವ್ಲಿಹುಡ್ ಬ್ಲಾಕ್ ಸಂಯೋಜಕಿ ಎ ರಜನಿ ಅವರು ಆಲುವಾದಿಂದ ಚೆಂಡುಮಲ್ಲಿಗೆ ಹೂವನ್ನು ಕಾಞಂಗಾಡಿಗೆ ತಲುಪಿಸಿದ್ದಾರೆ. ಕಾಞಂಗಾಡ್ ಕೃಷಿ ಅಧಿಕಾರಿ ಕೆ.ಮುರಳೀಧರನ್, ಕೃಷಿ ಸಹಾಯಕ ರಂಜಿತ್ ಟಿ.ಕೆ, ಹೊಸದುರ್ಗ ಬಿ.ಆರ್.ಸಿ. ಅನುಭವಿ ಶಿಕ್ಷಕಿ ಪ್ರಸನ್ನ ಕುಮಾರಿ ಕೃಷಿಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸುಮಾರು ನೂರೈವತ್ತು ಚೆಂಡುಮಲ್ಲಿಗೆ ಸಸಿಗಳನ್ನು ಶಾಲಾ ಆವರಣ ಹಾಗೂ ಗ್ರೋ ಬ್ಯಾಗ್ಗಳಲ್ಲಿ ನೆಡಲಾಯಿತು. ಪ್ರಾಂಶುಪಾಲ ಡಾ. ಎ.ವಿ.ಸುರೇಶ್ ಬಾಬು, ಮುಖ್ಯಶಿಕ್ಷಕ ರಾಜೇಶ್ ಎಂ.ಪಿ, ಪೆÇಲೀಸ್ ಅಧಿಕಾರಿಗಳು ಪಿಟಿಎ, ಎಸ್ಎಂಸಿ ಪ್ರತಿನಿಧಿಗಳು, ಶಿಕ್ಷಕರು, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಅತಿಥಿಗಳು ಚೆಂಡುಮಲ್ಲಿಗೆ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಮುದಾಯ ಪೆÇಲೀಸ್ ಅಧಿಕಾರಿಗಳಾದ ವಹೀದತ್ ಟಿ, ಸಿಂಧು ಟಿಟಿವಿ ನೇತೃತ್ವ ವಹಿಸಿದ್ದರು.