HEALTH TIPS

ಸ್ಲಾö್ಯಬ್ ಕುಸಿದು ತಿಂಗಳು ಕಳೆದರೂ ಪರಿಹಾರವಾಗದ ಸಮಸ್ಯೆ: ನಾಗರಿಕರಿಂದ ತೀವ್ರ ಆಕ್ರೋಶ

           ಮಂಜೇಶ್ವರ:  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ೧೨ ನೇ ವಾರ್ಡಿನ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಮುಂಬಾಗದಲ್ಲಿ ತ್ಯಾಜ್ಯ ನೀರು ಹರಿದು ಹೋಗುವ ಸ್ಲಾಬ್ ಕುಸಿದು ಬಿದ್ದು ತಿಂಗಳುಗಳೇ ಕಳೆದರೂ ಈ ಬಗ್ಗೆ ಸ್ಥಳೀಯರು ಆರೋಗ್ಯ ಇಲಾಖೆಯ ಹಾಗೂ ಗ್ರಾಮ ಪಂಚಾಯತಿ ಅಧಿಕಾರಸ್ಕರ ಗಮನಕ್ಕೆ ತಂದರೂ ಯಾರೂ ಇತ್ತ ಗಮನ ಹರಿಸುವುದಿಲ್ಲವೆಂದು ಸ್ಥಳೀಯರು ದೂರುತಿದ್ದಾರೆ.

          ಈ ಸ್ಲಾಬ್ ಕುಸಿದ ಚರಂಡಿಯ ಮುಂಬಾಗದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸಿದ್ದು, ತೆರೆದಿಟ್ಟಿರುವ ಚರಂಡಿಯ ದುರ್ಗಂಧದಿAದ ಮೂಗುಮುಚ್ಚಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ರಿಜಿಸ್ಟ್ರಾರ್ ಕಚೇರಿಗೂ ಈ ಇದೇ ಚರಂಡಿಯ ಮುಂಭಾಗದಿAದ ತೆರಳಬೇಕಾಗಿದೆ. ವಿದ್ಯಾರ್ಥಿಗಳ ಪೋಷಕರು ಚರಂಡಿಯ ನೀರಿನ ದುರ್ಗಂಧದಿAದ ಸಾಂಕ್ರಾಮಿಕ ರೋಗ ಭೀತಿಯಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

         ಮಳೆಗಾಲದ ಹಿನ್ನೆಲೆಯಲ್ಲಿ ಚರಂಡಿಯ ತ್ಯಾಜ್ಯ ನೀರಿನೊಂದಿಗೆ ಮಳೆ ನೀರು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಹರಿಯುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ದಸ್ತಾವೇಜು ಬರಹಗಾರರು ಹಾಗೂ ಇತರ ಹಲವಾರು ಕಚೇರಿಗಳು ಇದರ ಸಮೀಪದಲ್ಲೇ ಇರುವ ಕಾರಣ ಈ ಪರಿಸರ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

          ಸ್ಥಳೀಯರು ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಿದಾಗ ತಕ್ಷಣ ವೀಕ್ಷಣೆ ನಡೆಸಿ ತೆರಳಿ ತಿಂಗಳುಗಳು ಕಳೆದರೂ ಯಾರೂ ತಿರುಗಿಯೂ ನೋಡಿಲ್ಲವೆಂದು ದೂರಲಾಗಿದೆ. ಸಂಬAಧಪಟ್ಟವರು ಇತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries