HEALTH TIPS

ರಾಜ್ಯದ 10 ಪೋಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪೋಲೀಸ್ ಪದಕ: ಎಡಿಜಿಪಿ ವೆಂಕಟೇಶ್ ರಿಗೆ ಸೇವಾ ಪದಕ

             ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೇರಳದ 10 ಪೆÇಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ. ಎಡಿಜಿಪಿ ವೆಂಕಟೇಶ್ ಅವರಿಗೆ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಯಿತು. ಇವರು ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದಾರೆ.

              ಗೌರವಾನ್ವಿತ ಸೇವಾ ಪದಕ ಪಡೆದವರು ಎಸ್ಪಿ ನಜೀಬ್ ಸುಲೈಮಾನ್, ಡಿವೈಎಸ್ಪಿ ಸಿನೋಜ್ ಟಿ. ಎಸ್, ಡಿವೈಎಸ್ಪಿ ಫಿರೋಜ್ ಎಂ ಶಫೀಕ್, ಡಿವೈಎಸ್ಪಿ ಪ್ರದೀಪ್ ಕುಮಾರ್ ಅಯ್ಯಪ್ಪನ್ ಪಿಳ್ಳೈ, ಡಿವೈಎಸ್ಪಿ ರಾಜಕುಮಾರ್ ಪುರುಷೋತ್ತಮನ್, ಇನ್ಸ್ ಪೆಕ್ಟರ್ ಶ್ರೀಕುಮಾರ್ ಎಂ. ಕೃಷ್ಣನ್ ಕುಟ್ಟಿ ನಾಯರ್, ಸಬ್ ಇನ್‍ಸ್ಪೆಕ್ಟರ್ ಸಂತೋಷ್ ಸಿಆರ್, ಸಬ್ ಇನ್ಸ್‍ಪೆಕ್ಟರ್ ರಾಜೇಶ್ ಕುಮಾರ್ ಶಶಿಧರನ್ ಲಕ್ಷ್ಮಿ ಅಮ್ಮ, ಹೆಡ್ ಕಾನ್‍ಸ್ಟೆಬಲ್ ಮೋಹನದಾಸನ್ ಘೋಷಿಸಲಾದ ಪೋಲೀಸರಾಗಿದ್ದಾರೆ. 

            ಅಗ್ನಿಶಾಮಕ ಇಲಾಖೆಯಿಂದ ಠಾಣಾಧಿಕಾರಿ ಮುರಳೀಧರನ್. ಸಿ. ಕೆ, ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾಧಿಕಾರಿ ದಿವುಕುಮಾರ್. ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಕೆ. ಬಿಜು, ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ (ಚಾಲಕ) ಸುಜಯನ್. ಕೆ, ಉಪ ಅಧೀಕ್ಷಕ ನರೇಂದ್ರ ಪಿಎಂ ಮತ್ತು ಸುಧಾರಣಾ ಸೇವೆಯಲ್ಲಿ ಸಹಾಯಕ ಅಧೀಕ್ಷಕ ಜಿಆರ್‍ಐ ಅಪ್ಪುಕುಟ್ಟಿ ವಿ ಅವರಿಗೆ ಸ್ತುತಾಹ್ರ್ಯ ಸೇವಾ ಪದಕವನ್ನು ಘೋಷಿಸಲಾಗಿದೆ. 

               ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ 1037 ಜನರಿಗೆ ಪದಕಗಳನ್ನು ನೀಡಲಾಗುತ್ತದೆ. ಇವರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನಮಾಡಲಾಗುವುದು. 


………….


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries