ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಜರಗಲಿರುವ ಶಿವಶಕ್ತೀ ಮಹಾಯಾಗದ ಸ್ವಾಗತ ಸಮಿತಿಯ ರಚನಾ ಸಮಾಲೋಚನಾ ಸಭೆ ಇಂದು(ಆ.11) ಬೆಳಗ್ಗೆ 10 ಕ್ಕೆ ಜರಗಲಿರುವುದು. ಊರಪರವೂರ ಭಗವದ್ಭಕ್ತರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನಿತ್ತು ಸಹಕರಿಸಬೇಕಾಗಿ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಶಕ್ತಿ ಮಹಾಯಾಗದ ಸಮಾಲೋಚನಾ ಸಭೆಯ ಆಮಂತ್ರಣವನ್ನು ಕೊಲ್ಯ್ರ ಶ್ರೀ ಮೂಕಾಂಬಿಕ ಕ್ಷೇತ್ರದ ಅಧ್ಯಕ್ಷ ಮಧುಸೂದನ ಆಯರ್ ಅವರಿಗೆ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಜೀಣೋದ್ದಾರ ಸಮಿತಿಯವರು ನೀಡಿ ಅವರನ್ನು ಆಮಂತ್ರಿಸಿದರು.