ಮಂಜೇಶ್ವರ: ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಮೀಯಪದವು ಇದರ 13ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿ.ಎ.ಯು.ಪಿ. ಶಾಲೆಯ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ ವಹಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ನಾರಾಯಣ ಹೆಗ್ಡೆ, ಎಸ್.ವಿ.ವಿ ಎಚ್.ಎಸ್ ಶಾಲೆಯ ಸಂಚಾಲಕÀ ಡಾ.ಜಯಪ್ರಕಾಶ್ ನಾರಾಯಣ್.ತೊಟ್ಟೆತ್ತೋಡಿ,ನಿವೃತ್ತ ಶಿಕ್ಷಕಿ ಹಾಗೂ ಲೇಖಕಿ ಲಕ್ಷ್ಮಿ.ವಿ.ಭಟ್, ವಿ.ಎ. ಯು.ಪಿ ಶಾಲಾ ಅಧ್ಯಾಪಕ ರಾಮಚಂದ್ರ. ಕೆ.ಎಂ,ವಿ.ಹಿಂ.ಪ ಜಿಲ್ಲಾ ದುರ್ಗವಾಹಿನಿ ಸಂಯೋಜಕಿ ಸೌಮ್ಯ ಪ್ರಕಾಶ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷ ಕೃಷ್ಣಪ್ರಸನ್ನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2023 - 24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿ ಪಡೆದ ಶುಭದ,ಸಾಕ್ಷಿ,ಅಭಿಜ್ಞಾ,ಶ್ರೀಜ ಶೆಟ್ಟಿ,ಸಾತ್ವಿಕ್ ,ಅಶ್ರೀಜಾ,ಸೃಜನಶ್ರೀ,ನಿಶ್ಮಿತಾ,ಶರಣ್ ಮೇಘ ಎಸ್ ರೈ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಕ್ಲಬ್ ನ ಸದಸ್ಯರಾದ ಪ್ರಥಮ್ ಶೆಟ್ಟಿ, ಪ್ರತೀಕ್ಷಾ.ಡಿ ಹಾಗೂ ಪ್ರಜ್ಞಾ ವಿ ರೈ ಇವರನ್ನು ಗೌರವಿಸಲಾಯಿತು.
ನಂತರ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮವನ್ನು ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ ,ವಂದಿಸಿದರು. ಕಿರಣ್ ಕುಮಾರ್ ಚಂಡಿತೋಟ ಕಾರ್ಯಕ್ರಮ ನಿರೂಪಿಸಿದರು. ನಂತರ ಕ್ಲಬ್ ನ ವಾರ್ಷಿಕ ವರದಿಯನ್ನು ರಘುವೀರ್ ರಾವ್ ವಾಚಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಿಶೋರ್ ಡಿ ಶೆಟ್ಟಿ ನಿರ್ಮಾಣದ ಲಕುಮಿ ತಂಡದ ಕುಸಲ್ದ ಕಲಾವಿದರು ಅಭಿನಯಿಸಿದ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.