ವಯನಾಡು: ಚಾಲಿಯಾರ್ ನದಿಯಲ್ಲಿ ಶೋಧ ಕಾರ್ಯಕ್ಕೆ ತೆರಳಿದ್ದ 18 ರಕ್ಷಣಾ ಕಾರ್ಯಕರ್ತರು ಕಾಡಿನಲ್ಲಿ ಸಿಲುಕಿಕೊಂಡಿದ್ದಾರೆ. ಸೂಜಿಪಾರ ಬಳಿಯ ಕಂಠಪಾರದಲ್ಲಿ ಸಿಲುಕಿಕೊಂಡಿರುವರು.
ಇಲ್ಲಿ ಸಿಕ್ಕ ಮೃತದೇಹವನ್ನೂ ತರುವಂತಿಲ್ಲ. ಅರಣ್ಯದಲ್ಲಿ ಚಾಲಿಯಾರ್ ನದಿ ಹರಿಯುವ ಪ್ರದೇಶಗಳಲ್ಲಿ ಶೋಧ ಕಾರ್ಯದ ಅಂಗವಾಗಿ ಇಂದು ಬೆಳಗ್ಗೆ ರಕ್ಷಣಾ ಸಿಬ್ಬಂದಿ ಹುಡುಕಾಟಕ್ಕೆ ತೆರಳಿದ್ದರು.
ಭೂಕುಸಿತದಲ್ಲಿ ಚಾಲಿಯಾರ್ ಹೊಳೆಯ ರಭಸಕ್ಕೆ ಕೊಚ್ಚಿ ಹೋಗಿರುವ ಕಲ್ಲು, ಮರಗಳ ನಡುವೆ ಮೃತದೇಹಗಳು ಹಾಗೂ ದೇಹದ ಭಾಗಗಳು ಬಿದ್ದಿವೆ.
ಇದೇ ವೇಳೆ ಸೂಜಿಪಾರ ಜಲಪಾತದ ಕೆಳಗೆ ಮತ್ತೊಂದು ಶವ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಕೆಎಸ್ ಇಬಿ ನೌಕರರು ಹಾಗೂ ಸ್ಥಳೀಯರು ನಡೆಸಿದ ತಪಾಸಣೆಯಲ್ಲಿ ಶವ ಪತ್ತೆಯಾಗಿದೆ.