HEALTH TIPS

ವಯನಾಡ್ ದುರಂತ; ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ನೀಡುವಂತೆ ಸಹಾರಾ ಗ್ರೂಪ್‍ಗೆ ಸುಪ್ರೀಂ ಕೋರ್ಟ್‍ನಿರ್ದೇಶನ

                ನವದೆಹಲಿ: ಭೂಕುಸಿತದಿಂದ ತತ್ತರಿಸಿರುವ ವಯನಾಡಿನ ಪುನರ್ವಸತಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ.ಗಳನ್ನು ನೀಡುವಂತೆ ಸಹಾರಾ ಗ್ರೂಪ್ ಗೆ ಸುಪ್ರೀಂ ಕೋರ್ಟ್ ನಿನ್ನೆ ಆದೇಶ ನೀಡಿದೆ.

                  ಸಹಾರಾ ಸಮೂಹದ ಅಡಿಯಲ್ಲಿರುವ ಹತ್ತು ಕಂಪನಿಗಳು ತಲಾ 10 ಲಕ್ಷ ರೂಪಾಯಿ ಮತ್ತು ಇಪ್ಪತ್ತು ನಿರ್ದೇಶಕರು ತಲಾ 5 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

              ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಅಕ್ಟೋಬರ್ 2023 ರಲ್ಲಿ, ಸಹಾರಾ ಫ್ಲಾಟ್‍ಗಳನ್ನು ಖರೀದಿಸಿದ ಗ್ರಾಹಕರಿಗೆ ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಆರು ಬಾರಿ ಕೋರ್ಟ್ ಸೂಚನೆ ನೀಡಿತ್ತು. ಆದರೆ, ನಿಯಮ ಪಾಲಿಸದ ಕಾರಣ ಎರಡು ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಸೂಚಿಸಲಾಗಿದೆ.

               ಸಹಾರಾ ಪರ ಹಿರಿಯ ವಕೀಲ ಸಿದ್ಧಾರ್ಥ ದವೆ, ವಕೀಲರಾದ ಸಿಮ್ರಂಜೀತ್ ಸಿಂಗ್, ಗೌತಮ್ ತಾಲೂಕ್ದಾರ್, ನೇಹಾ ಗುಪ್ತಾ, ಕರಣ್ ಜೈನ್, ರಿಷಬ್ ಪಂತ್ ಮತ್ತು ಯಜತ್ ಗುಲಿಯಾ ವಾದ ಮಂಡಿಸಿದರು. ವಕೀಲರಾದ ಸಿದ್ಧಾರ್ಥ್ ಬಾತ್ರಾ, ಅರ್ಚನಾ ಯಾದವ್, ಚಿನ್ಮಯ್ ದುಬೆ, ಶಿವಾನಿ ಚಾವ್ಲಾ, ರಿತಮ್‍ಕಟ್ಯಾಲ್ ಮತ್ತು ಪ್ರತ್ಯೂಷ್ ಅರೋರಾ ಬಳಕೆದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

               ಜುಲೈ 30 ರಂದು ವಯನಾಡ್ ಭೂಕುಸಿತ ಸಂಭವಿಸಿದೆ. ಈ ದುರಂತದಲ್ಲಿ ನಾನೂರಕ್ಕೂ ಹೆಚ್ಚು ಜನ ಮೃತರಾಗಿರುವರು. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ನೂರಾರು ಜನರು ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries