HEALTH TIPS

ಎಲ್ಲರನ್ನೂ ಕಳಕೊಂಡ 21 ಜನರಿಗೆ ವಿಶೇಷ ಪುನರ್ವಸತಿ ಯೋಜನೆ

                 ವಯನಾಡ್: ವಯನಾಡ್ ದುರಂತದಲ್ಲಿ 21 ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

                 ಪುನರ್ವಸತಿಗೆ ಸರ್ಕಾರ ಮುಂದಾದಾಗ ಇದು ಅತ್ಯಂತ ದುಃಖಕರ ಸಂಗತಿಯಾಗಿ ಹೊರಬಿದ್ದಿದೆ.  ಐವರು ಪುರುಷರು, 10 ಮಹಿಳೆಯರು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 6 ಮಕ್ಕಳಿಗೆ ಪ್ರಸ್ತುತ ತಮ್ಮವರೆಂದು ಹೇಳಿಕೊಳ್ಳುವ ಯಾರೂ ಇಲ್ಲವಾಗಿದ್ದಾರೆ. ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಈ ಮೂಲಕ ವಿಶೇಷ ಪ್ಯಾಕೇಜ್  ಉದ್ದೇಶಿಸಲಾಗಿದೆ.

                 ಏತನ್ಮಧ್ಯೆ, ಸೂಕ್ತ ಭೂಮಿ ಲಭ್ಯವಿರುವುದರಿಂದ ಪುನರ್ವಸತಿಗಾಗಿ ಒಂದಕ್ಕಿಂತ ಹೆಚ್ಚು ಟೌನ್‍ಶಿಪ್ ಸ್ಥಾಪಿಸಲು ಸರ್ಕಾರ ಪ್ರಸ್ತುತ ಯೋಜಿಸುತ್ತಿದೆ. ಈ ನಿಟ್ಟಿನಲ್ಲಿ ಹತ್ತು ಕಡೆ ಪರಿಶೀಲನೆ ನಡೆಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ತಜ್ಞರ ಮೌಲ್ಯಮಾಪನದ ನಂತರ ಭೂಕುಸಿತದ ಅಪಾಯವಿಲ್ಲ ಎಂದು ಖಚಿತಪಡಿಸಿದ ಸ್ಥಳದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಊರಿನ ಹೊರಗೆ ವಾಸಿಸಲು ಬಯಸುವವರ ಹಿತಾಸಕ್ತಿಯನ್ನೂ ರಕ್ಷಿಸಬೇಕಾಗಿದೆ. ಭೂಕುಸಿತಕ್ಕೆ ಒಳಗಾದವರಿಗೆ ಮಾತ್ರವಲ್ಲದೆ ಸಮೀಪದ ಭೂಕುಸಿತ ಪೀಡಿತ ಪ್ರದೇಶಗಳಲ್ಲಿರುವವರಿಗೂ ಪುನರ್ವಸತಿ ಕಲ್ಪಿಸುವುದು ಲಕ್ಷ್ಯವಾಗಿದೆ. ಯೋಜನೆಯಲ್ಲಿ ಕೃಷಿ ಸೇರಿದಂತೆ ಪುನರ್ವಸತಿ ಜನರ ಜೀವನಾಧಾರವಾಗಬೇಕು ಎಂದು ಲಕ್ಷ್ಯವಿರಿಸಲಾಗಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries