ವಯನಾಡ್: ವಿಪತ್ತು ಪ್ರದೇಶದಲ್ಲಿ 35 ಗಂಟೆಗಳ ಪ್ರಯತ್ನದ ನಂತರ ಸೇನೆಯು ಚುರಲ್ಮಲಾದಲ್ಲಿ ಬೈಲಿ ಸೇತುವೆಯನ್ನು ಸ್ಥಾಪಿಸಿತು.
ಸೇತುವೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮಿಲಿಟರಿ ವಾಹನಗಳು ಮೊದಲು ಹಾದುಹೋದವು. ಸೇನೆಯ ಸ್ಕಾರ್ಪಿಯೋ ವಾಹನ ಮೊದಲು ಸಾಗಿತು. ಬಳಿಕ ಸೇನೆಯ ಆಂಬ್ಯುಲೆನ್ಸ್ ಹಾಗೂ ಟ್ರಕ್ ಎರಡೂ ಕಡೆ ಸಂಚರಿಸಿದವು. ನಂತರ ರಕ್ಷಣಾ ಕಾರ್ಯಾಚರಣೆಗೆ ಜೆಸಿಬಿ ಕೂಡ ರವಾನಿಸಲಾಯಿತು.
24 ಟನ್ ತೂಕ ಸಾಮರ್ಥ್ಯದ ಸೇತುವೆ ನಿರ್ಮಾಣದಿಂದ ಮುಂಡಕೈಯಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತು ಭಾರೀ ಯಂತ್ರೋಪಕರಣಗಳ ವಿತರಣೆಗೆ ಅನುಕೂಲವಾಗಲಿದೆ. ಹೊಸ ಸೇತುವೆ ಮೂಲಕ ವಾಹನಗಳು ಮತ್ತು ಯಂತ್ರಗಳು ಬಂದರೆ ಭೂಕುಸಿತದಿಂದ ಬಿದ್ದ ಬೃಹತ್ ಮರಗಳನ್ನು ಕಡಿಯಲು, ನಾಶವಾದ ಮನೆಗಳ ಅವಶೇಷ ವಿಲೇವಾರಿ ಇತ್ಯಾದಿ.
ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ಮಾತನಾಡಿ, 30ರಂದು ಬೆಳಗ್ಗೆ ಆರಂಭವಾದ ಸೇತುವೆ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಂಡಿದೆ. ಸವಾಲಿನ ಪ್ರತಿಕೂಲ ವಾತಾವರಣವನ್ನು ಮೆಟ್ಟಿನಿಂತು ಮಹಿಳಾ ಅಧಿಕಾರಿಗಳನ್ನೊಳಗೊಂಡ ತಂಡ ಹಗಲು ರಾತ್ರಿಯೆನ್ನದೇ ಕಾಮಗಾರಿ ಪೂರ್ಣಗೊಳಿಸಿದೆ. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳೊಂದಿಗೆ ಸೈನಿಕರು ಕೈಗೊಂಡ ಕಾರ್ಯವನ್ನು ಪೂರ್ಣಗೊಳಿಸಿದ ಸಂತೋಷವನ್ನು ಹಂಚಿಕೊAಡರು. ಬೃಹತ್ ಕಬ್ಬಿಣದ ವಸ್ತುಗಳು ಮತ್ತು ಉಪಕರಣಗಳನ್ನು ಇಳಿಸುವ ಮೂಲಕ ಸೇನೆಯು ಅಪ್ರತಿಮ ಕ್ರಮ ಕೈಗೊಂಡಿದೆ.
ವಾಯುಪಡೆಯ ವಿಮಾನಗಳ ಮೂಲಕ ಕಣ್ಣೂರಿಗೆ ತಂದ ನಿರ್ಮಾಣ ಸಾಮಗ್ರಿಗಳನ್ನು ಟ್ರಕ್ಗಳಲ್ಲಿ ಚುರಲ್ಮಲಾಗೆ ತರಲಾಯಿತು. ಕಣ್ಣೂರು ರಕ್ಷಣಾ ಭದ್ರತಾ ಪಡೆ (ಡಿಎಸ್ಸಿ) ಕ್ಯಾಪ್ಟನ್ ಪುರಂಸಿAಗ್ ನಥಾವತ್ ಮತ್ತು ಕೇರಳ ಮತ್ತು ಕರ್ನಾಟಕ ಸಬ್-ಏರಿಯಾ ಜನರಲ್ ಆಫೀಸರ್ ಕಮಾಂಡಿAಗ್ (ಜಿಒಸಿ) ಮೇಜರ್ ಜನರಲ್ ವಿಟಿ ಮ್ಯಾಥ್ಯೂ ಅವರ ನೇತೃತ್ವದಲ್ಲಿ ನಿರ್ಮಾಣವನ್ನು ನಡೆಸಲಾಯಿತು. ಪಿಇ ಫ್ಯಾಬ್ರಿಕೇಟೆಡ್ ಸ್ಟೀಲ್ ವಸ್ತುಗಳು ಮತ್ತು ಮರವನ್ನು ಬಳಸಿ ಸೇತುವೆಯನ್ನು ನಿರ್ಮಿಸಲಾಗಿದೆ. ಬಲವನ್ನು ಖಚಿತಪಡಿಸಿಕೊಳ್ಳಲು ಮಧ್ಯದಲ್ಲಿ ಕಂಬವನ್ನು ಸಹ ಒದಗಿಸಲಾಗಿದೆ.