ತಿರುವನಂತಪುರ: ಕೇರಳದಲ್ಲಿ ಸಂಭವಿಸಿದ ಭೀಕರ ಭೂ ಕುಸಿತ ಸಂಭವಿಸುವ 5 ಗಂಟೆ ಮೊದಲೇ ವಯನಾಡಿನಲ್ಲಿ ಸ್ಥಳೀಯ ಸುದ್ದಿವಾಹಿನಿ ವರದಿಗಾರ ಸಂಭಾವ್ಯ ದುರಂತದ ಕುರಿತು 5 ಗಂಟೆ ಮೊದಲೇ ವರದಿ ಮಾಡಿದ್ದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
190ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತದ ಬಗ್ಗೆ ಸ್ಥಳೀಯ ಪತ್ರಕರ್ತ ಮಾಡಿದ್ದ ವರದಿಯೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ದುರಂತ ಸಂಭವಿಸುವ 5 ಗಂಟೆ ಮೊದಲು ಈ ವರದಿಗಾರ ಸಂಭಾವ್ಯ ದುರಂತದ ಬಗ್ಗೆ ಎಚ್ಚರಿಸಿದ್ದ ಎನ್ನಲಾಗಿದೆ.
ಸ್ಥಳೀಯ ಸುದ್ದಿವಾಹಿನಿಯೊಂದರ ವರದಿಗಾರ ವಯನಾಡಿನ ನದಿಯ ಬಳಿ ನಿಂತು ನದಿ ನೀರಿನಲ್ಲಿ ಮಣ್ಣು ಮಿಶ್ರಣವಾಗಿ ಹರಿಯುತ್ತಿದೆ. ಅಲ್ಲದೆ ನದಿಯಲ್ಲಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ಮತ್ತು ಮರದ ತುಂಡುಗಳು ಹರಿಯುತ್ತಿದ್ದು, ಇದು ಗುಡ್ಡದಲ್ಲಿ ಭೂಕುಸಿತವಾಗಿರುವ ಕುರಿತು ಮುನ್ಸೂಚನೆಯೇ? ಎಂದು ವರದಿ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋ ಸುದ್ದಿವಾಹಿನಿಯಲ್ಲಿ ಪ್ರಸಾರವಾದ 5 ಗಂಟೆಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು sonyjamesv ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ವೈರಲ್ ಆಗಿದ್ದು ಇದನ್ನು ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.