ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಜಿಲ್ಲಾ ಕುಲಾಲ ಸಮುದಾಯದ ಭವನ ಕೇಂದ್ರ ಕಚೇರಿ ತೂಮಿನಾಡು ಕುಂಜತ್ತೂರುನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾ ಮಕ್ಕಳ 'ವಂದೇ ಮಾತರಂ 'ಹಾಡಿನ ಮೂಲಕ ಆಚರಿಸಲಾಯಿತು. ಬೆಳಗ್ಗೆ ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ಧ್ವಜಾರೋಹಣಗೈದರು. ಜಿಲ್ಲಾ ಕುಲಾಲ ಸಮುದಾಯದ ಭವನದ ಕಟ್ಟಡ ಸಮಿತಿ ಅಧ್ಯಕ್ಷ ಬಾಲಕೃಷ್ಣ ದೀಕ್ಷಾ, ಕುಲಾಲ ಸಂಘ ಮಂಜೇಶ್ವರ ಶಾಖೆ ಅಧ್ಯಕ್ಷ ಗೋಪಾಲ ಸಾಲ್ಯಾನ್ ಕಣ್ವತೀರ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈಶ್ವರ ಕುಲಾಲ್ ಕಣ್ವತೀರ್ಥ ಸ್ವಾಗತಿಸಿ, ಆನಂದ ಕುಲಾಲ್ ಕಣ್ವತೀರ್ಥ ವಂದಿಸಿದರು.