HEALTH TIPS

ಜಾಗತಿಕ ಆಹಾರ ಭದ್ರತೆಗೆ ಭಾರತವೇ ಪರಿಹಾರ: ಪ್ರಧಾನಿ ಮೋದಿ

ನವದೆಹಲಿ: ಜಾಗತಿಕ ಆಹಾರ ಭದ್ರತೆಗೆ ಭಾರತವೇ ಪರಿಹಾರವಾಗಿದ್ದು, ಜಾಗತಿಕ ಪೌಷ್ಠಿಕಾಂಶದ ಬಿಕ್ಕಟ್ಟನ್ನು ಹೊಡೆದೋಡಿಸುವಲ್ಲಿ ಭಾರತದ ಅನೇಕ ಆಹಾರಗಳು ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಶನಿವಾರ ನಡೆದ 32 ಕೃಷಿ ಅರ್ಥಶಾಸ್ತ್ರಜ್ಞರ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ''ಜಗತ್ತಿನ ಸೂಪರ್​ ಫುಡ್​ಗಳ ಬುಟ್ಟಿಯಲ್ಲಿ ಭಾರತದ ಪಾಲನ್ನು ಹಂಚಿಕೊಳ್ಳಲು ಬಯಸುತ್ತದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ(ಮಿಲ್ಲೆಟ್​) ಉತ್ಪಾದಿಸುವ ದೇಶ ಭಾರತವಾಗಿದೆ. ಜಗತ್ತು ಇದನ್ನು ಸೂಪರ್​ ಫುಡ್​ ಎಂದು ಕರೆಯುತ್ತದೆ. ಇದನ್ನು ನಾವು ಶ್ರೀಅನ್ನ ಎಂದು ಗುರುತಿಸಿದ್ದೇವೆ ಎಂದರು.

ಜಾಗತಿಕ ಆಹಾರ ಭದ್ರತೆಗೆ ಭಾರತವೇ ಪರಿಹಾರ

ಇದೇ ವೇಳೆ ಜಾಗತಿಕ ಆಹಾರ ಭದ್ರತೆಗೆ ಭಾರತವೇ ಪರಿಹಾರ ಎಂದ ಪ್ರಧಾನಿ ಮೋದಿ, ಭಾರತವು ಈಗ ಆಹಾರದ ಹೆಚ್ಚುವರಿ ದೇಶವಾಗಿದ್ದು, ಜಾಗತಿಕ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಭದ್ರತೆಗೆ ಪರಿಹಾರಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಕೃಷಿಯು ಭಾರತದ ಆರ್ಥಿಕ ನೀತಿಯ ಕೇಂದ್ರವಾಗಿದೆ. ಇತ್ತೀಚಿನ ಕೇಂದ್ರ ಬಜೆಟ್ ಸುಸ್ಥಿರ ಮತ್ತು ಹವಾಮಾನ-ನಿರೋಧಕ ಕೃಷಿಗೆ ದೊಡ್ಡ ಉತ್ತೇಜನವನ್ನು ನೀಡಿದೆ ಮತ್ತು ಭಾರತೀಯ ರೈತರನ್ನು ಬೆಂಬಲಿಸಲು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ವರ್ಷಗಳ ನಿರಂತರ ಪ್ರಯತ್ನಗಳ ನಂತರ, ಈಗ ಭಾರತವು ಆಹಾರದ ಹೆಚ್ಚುವರಿ ದೇಶವಾಗಿದೆ.

ಭಾರತವು ಹಾಲು, ಬೇಳೆಕಾಳುಗಳು ಮತ್ತು ಸಾಂಬಾರ ಪದಾರ್ಥಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಅಲ್ಲದೆ, ದೇಶವು ಆಹಾರ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಹತ್ತಿ, ಸಕ್ಕರೆ ಮತ್ತು ಚಹಾದಲ್ಲಿ ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಭಾರತದ ಆಹಾರ ಭದ್ರತೆ ಜಗತ್ತಿಗೆ ಕಳವಳಕಾರಿಯಾಗಿದ್ದ ಕಾಲವೊಂದಿತ್ತು. ಆದರೆ ಈಗ, ಭಾರತವು ಜಾಗತಿಕ ಆಹಾರ ಭದ್ರತೆ ಮತ್ತು ಜಾಗತಿಕ ಪೌಷ್ಟಿಕಾಂಶದ ಭದ್ರತೆಗೆ ಪರಿಹಾರಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ.

ಸುಸ್ಥಿರ ಕೃಷಿ ಮತ್ತು ಆಹಾರ ವ್ಯವಸ್ಥೆಗಳ ಮುಂದಿರುವ ಸವಾಲುಗಳನ್ನು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ' ಎಂಬ ಸಮಗ್ರ ವಿಧಾನದ ಮೂಲಕ ಮಾತ್ರ ಇದನ್ನು ನಿಭಾಯಿಸಬಹುದು ಎಂದರು.

ಸಣ್ಣ ಹಿಡುವಳಿಗಾರರೇ ಬೆನ್ನೆಲುಬು

ಭಾರತದಲ್ಲಿನ ಶೇ 90ರಷ್ಟು ಕುಟುಂಬಗಳು ಸಣ್ಣ ಭೂಮಿಯನ್ನು ಹೊಂದಿದೆ. ಈ ಸಣ್ಣ ರೈತರೇ ಭಾರತದ ಆಹಾರ ಭದ್ರತೆಯ ಬೆನ್ನೆಲುಬಾಗಿದ್ದಾರೆ. ಸಣ್ಣ ರೈತರು ಆಹಾರ ಭದ್ರತೆಗಾಗಿ ದೇಶದ ದೊಡ್ಡ ಶಕ್ತಿಯಾಗಿದ್ದಾರೆ. ಏಷ್ಯಾದ ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇದೇ ರೀತಿ ಪರಿಸ್ಥಿತಿ ಇದೆ. ಈ ಹಿನ್ನೆಲೆ ಭಾರತದ ಮಾದರಿಗಳು ಅನೇಕ ದೇಶಗಳಿಗೆ ಪ್ರಯೋಜನವಾಗಲಿವೆ. ಭಾರತದ ಆಹಾರ ಭದ್ರತೆ ಜಗತ್ತಿನ ಕಾಳಜಿ ವಿಷಯವಾಗಿದ್ದ ಕಾಲವೊಂದಿತ್ತು. ಆದರೆ ಇದೀಗ ಭಾರತ ಜಾಗತಿಕ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆಯ ಪರಿಹಾರವನ್ನು ಒದಗಿಸುವಲ್ಲಿ ನಿರಂತರವಾಗಿದೆ ಎಂದರು.

ಆಯುರ್ವೇದ ವಿಜ್ಞಾನ

ಅಂತೆಯೇ ಆಯುರ್ವೇದ ವಿಜ್ಞಾನ ಕುರಿತು ಒತ್ತಿ ಹೇಳಿದ ಪ್ರಧಾನಿ, ಆಯುರ್ವೇದ ವಿಜ್ಞಾನವೂ ನಮ್ಮ ಆಹಾರದ ಜೊತೆಗಿನ ವೈದ್ಯಕೀಯ ಪರಿಣಾಮಗಳ ಬಳಕೆ ಮಾಡಿಕೊಂಡಿ ಪ್ರಯೋಜನಕಾರಿ ಮಾಹಿತಿಯನ್ನು ನೀಡುತ್ತಿದೆ. ಅವರ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯು ಭಾರತದ ಸಾಮಾಜಿಕ ಜೀವನದ ಭಾಗವಾಗಿದೆ. ಪ್ರಾಚೀನ ಭಾರತೀಯರು ಕೃಷಿ ಮತ್ತು ಆಹಾರದ ಅನುಭವ ಮತ್ತು ನಂಬಿಕೆಯನ್ನು ಹೊಂದಿದ್ದರು. ಭಾರತದಲ್ಲಿ ಕೃಷಿ ಸಂಪ್ರದಾಯವೂ ವಿಜ್ಞಾನ ಮತ್ತು ತರ್ಕಕ್ಕೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಅಂತೆಯೇ ಭಾರತದ ಸುಸ್ಥಿರ ಕೃಷಿಯ ಪ್ರಗತಿಯನ್ನು ಎತ್ತಿ ಹಿಡಿದ ಮೋದಿ, ಕಳೆದ 10 ವರ್ಷಗಳಲ್ಲಿ ದೇಶವು 1,900 ಹೊಸ ಹವಾಮಾನ-ನಿರೋಧಕ ಬೆಳೆಗಳನ್ನು ಅಭಿವೃದ್ಧಿಪಡಿಸಿದೆ. ಭಾರತವು ರಾಸಾಯನಿಕ ಮುಕ್ತ ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ ಮತ್ತು ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣವನ್ನು ಸಾಧಿಸುವತ್ತ ಸಾಗುತ್ತಿದೆ. ಭಾರತೀಯ ಕೃಷಿ ಸಂಪ್ರದಾಯದಲ್ಲಿ ವಿಜ್ಞಾನ ಮತ್ತು ತರ್ಕಶಾಸ್ತ್ರಕ್ಕೆ ಆದ್ಯತೆ ನೀಡಲಾಗಿದೆ. ಭಾರತವು ತನ್ನ ಪರಂಪರೆಯ ಆಧಾರದ ಮೇಲೆ ಕೃಷಿ ಶಿಕ್ಷಣ ಮತ್ತು ಸಂಶೋಧನೆಯ ದೃಢವಾದ ವ್ಯವಸ್ಥೆಯನ್ನು ಹೊಂದಿದೆ. ಭಾರತವು ಈಗ ಕೃಷಿಗಾಗಿ 500 ಕ್ಕೂ ಹೆಚ್ಚು ಕಾಲೇಜುಗಳನ್ನು ಹೊಂದಿದೆ ಮತ್ತು 700 ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳನ್ನು ಹೊಂದಿದೆ ಎಂದು ಹೇಳಿದರು.

ಅಲ್ಲದೆ ಕೆಲವು ಭತ್ತದ ಬೆಳೆಗಳನ್ನು ಉಲ್ಲೇಖಿಸಿದ ಅವರು, ಮಣಿಪುರ, ಅಸ್ಸಾಂ ಮತ್ತು ಮೇಘಾಲಯದ ಕಪ್ಪು ಅಕ್ಕಿ ಅದರ ಔಷಧೀಯ ಮೌಲ್ಯದಿಂದಾಗಿ ಆದ್ಯತೆಯ ಆಯ್ಕೆಯಾಗಿದೆ. ಭಾರತದ ರಾಗಿ ಬುಟ್ಟಿಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಭಾರತದ ಇಚ್ಛೆ ಮತ್ತು ಕೃಷಿ ಕ್ಷೇತ್ರದಲ್ಲಿ ಭಾರತವು ಡಿಜಿಟಲ್ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತು ಮೋದಿ ಮಾತನಾಡಿದರು.

''ಕಳೆದ ಬಾರಿ ಐಸಿಎಇ ಸಮಾವೇಶದಲ್ಲಿ ಭಾರತ ಆಗಷ್ಟೇ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಆ ಸಮಯದಲ್ಲಿ ಭಾರತದ ಆಹಾರ ಭದ್ರತೆ ಮತ್ತು ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳಿದ್ದರು. ಇದೀಗ ಭಾರತದ ದೇಹದಲ್ಲಿ ಹೆಚ್ಚುವರಿ ಆಹಾರ ಇದೆ. ಭಾರತದಲ್ಲಿ ಹಾಲು, ಬೇಳೆ ಮತ್ತು ಮಸಾಲೆಗಳನ್ನು ಯಥೇಚ್ಛವಾಗಿ ಉತ್ಪಾದನೆ ಮಾಡಲಾಗುತ್ತಿದೆ. ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಬೆಳೆಗಳ ಸಮೀಕ್ಷೆಗೆ ಡಿಜಿಟಲ್​ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡಲಾಗಿದೆ.

ನಮ್ಮ ರೈತರು ನೈಜ ಸಮಯದಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದ ಅವರು ದತ್ತಾಂಶ ಆಧಾರಿತ ನಿರ್ಧಾರ ನಡೆಸಲು ಸಾಧ್ಯವಾಗುತ್ತಿದೆ. ಈ ಕ್ರಮವೂ ಕೋಟ್ಯಾಂತರ ರೈತರಿಗೆ ಪ್ರಯೋಜನಕಾರಿಯಾಗಿದ್ದು, ಆರ್ಥಿಕತೆ ಯೋಗಕ್ಷೇಮವನ್ನು ವೃದ್ಧಿಸಿದೆ. ಈ ವರ್ಷ ಸುಸ್ಥಿರ ಕೃಷಿ ಆಹಾರ ವ್ಯವಸ್ಥೆಯೆಡೆಗೆ ಪರಿವರ್ತನೆ ಎಂಬ ಧ್ಯೇಯದಲ್ಲಿ ಸಮಾವೇಶ ನಡೆಸಲಾಗಿದೆ ಎಂದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries