HEALTH TIPS

ಮಹಮ್ಮದ್ ಹಾಜಿ ಕೊಲೆ ಪ್ರಕರಣ-ನಾಲ್ವರು ಅಪರಾಧಿಗಳಿಗೆ ಜೀವಾವಧಿ, ದಂಡ

             ಕಾಸರಗೋಡು: ಅಡ್ಕತ್ತಬೈಲ್ ಬಿಲಾಲ್ ಮಸೀದಿ ಸನಿಹದ ನಿವಾಸಿ, ಸಿ.ಎ. ಮಹಮ್ಮದ್ ಹಾಜಿ(56)ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ(ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

          ಕೂಡ್ಲು ಗುಡ್ಡೆ ಟೆಂಪಲ್ ರಸ್ತೆ ನಿವಾಸಿ ಸಂತೋಷ್ ನಾಯ್ಕ್ ಯಾನೆ ಬಜೆ ಸಂತೋಷ್, ತಾಳಪಿಪಡ್ಪು ನಿವಾಸಿ ಶಿವಪ್ರಸಾದ್ ಯಾನೆ ಶಿವ, ಅಯ್ಯಪ್ಪನಗರ ನಿವಾಸಿ ಕೆ. ಅಜಿತ್‍ಕುಮಾರ್ ಯಾನೆ ಅಜು, ಅಡ್ಕತ್ತಬೈಲ್ ಉಸ್ಮನ್‍ನಗರ ಕ್ವಾಟ್ರಸ್ ನಿವಾಸಿ ಕೆ.ಜಿ ಕಿಶೋರ್‍ಕುಮಾರ್ ಯಾನೆ ಕಿಶೋರ್ ಶಿಕ್ಷೆಗೊಳಗಾದವರು. ನಾಲ್ಕೂ ಮಂದಿ ಆರೋಪಿಗಳಿಗೆ ತಲಾ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ. 2008 ಏ. 18ರಂದು ಬಿಲಾಲ್ ಮಸೀದಿ ಸನಿಹ ಸಿ.ಎ ಮಹಮ್ಮದ್ ಅವರನ್ನು ಪುತ್ರನ ಎದುರೇ ತಂಡ ಕಡಿದು ಕೊಲೆಗೈದಿರುವ ಬಗ್ಗೆ ಕೇಸು ದಾಖಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries