ಕೊಚ್ಚಿ: ವಡಗರದಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ 9 ವರ್ಷದ ಬಾಲಕಿಯ ಸಂಕಷ್ಟದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಪೋಲೀಸ್ ವೈಫಲ್ಯದ ಬಗ್ಗೆ ತುರ್ತು ವರದಿ ಕೇಳಿದರು.
ಕಾನೂನು ಸೇವಾ ಪ್ರಾಧಿಕಾರದ ಮೂಲಕ ಮಧ್ಯಸ್ಥಿಕೆ ವಹಿಸಲಾಗಿದೆ. ವಡಗರ ಗ್ರಾಮಾಂತರ ಪೋಲೀಸರಿಂದ ತುರ್ತು ವರದಿ ಕೇಳಲಾಗಿದೆ. ಅಪಘಾತಪಡಿಸಿದ ಕಾರನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಪುತ್ರಿಯ ಚಿಕಿತ್ಸೆಗಾಗಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶಾಶ್ವತವಾಗಿ ಉಳಿಯಬೇಕಿದ್ದ ಬಡ ಕುಟುಂಬಕ್ಕೆ ಅಪಘಾತ ವಿಮೆ ಕೂಡ ಸಿಗಲಿಲ್ಲ. ಸಿಸಿಟಿವಿಯಂತಹ ಹಲವು ಕಣ್ಗಾವಲು ವ್ಯವಸ್ಥೆಗಳಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದ ಪುರಾವೆಗಳು ಪೋಲೀಸರಿಗೆ ಲಭಿಸಿಲ್ಲ. ಕಾರು ಅಪಘಾತವಾಗಿ ಆರು ತಿಂಗಳಾದರೂ ಡಿಕ್ಕಿ ಹೊಡೆದ ಕಾರು ಪತ್ತೆಯಾಗಿಲ್ಲ.
ಸಿಸಿಟಿವಿ ಸೇರಿದಂತೆ ಕಣ್ಗಾವಲು ವ್ಯವಸ್ಥೆ ಇದ್ದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗಿರುವ ಬಿಳಿ ಕಾರನ್ನು ವಡಗರ ಸ್ಥಳೀಯ ಪೋಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಕ್ರೈಂ ಬ್ರಾಂಚ್ ನಾಲ್ಕು ತಿಂಗಳ ಹಿಂದೆ ಪ್ರಕರಣವನ್ನು ಕೈಗೆತ್ತಿಕೊಂಡರೂ ಯಾವುದೇ ಸುಳಿವು ಸಿಗಲಿಲ್ಲ. ವಾಹನ ಸಿಗದಿದ್ದರೆ ಬಡ ಕುಟುಂಬಕ್ಕೆ ಅಪಘಾತ ವಿಮೆಯೂ ಸಿಗುವುದಿಲ್ಲ. ಕಾರು ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂಬುದು ಪೋಲೀಸರ ವಿವರಣೆ ನೀಡುತ್ತಲೇ ಇದ್ದಾರೆ.
ಇದೇ ವೇಳೆ ಮಗುವಿಗೆ ಕಾನೂನು ನೆರವು ನೀಡುವುದಾಗಿ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ. ಈ ವರ್ಷ ಫೆಬ್ರವರಿ 17 ರಂದು, ಒಂಬತ್ತು ವರ್ಷದ ದೃಶಾನಾ ಮತ್ತು ಆಕೆಯ ಅಜ್ಜಿ, ಕಣ್ಣೂರು ಮೂಲದ 68 ವರ್ಷದ ಬೇಬಿ, ಅವರು ಹತ್ತು ಗಂಟೆಯ ಸುಮಾರಿಗೆ ವಡಗÀರ ಚೋರೋಡ್ನಲ್ಲಿ ರಸ್ತೆ ದಾಟುತ್ತಿದ್ದಾಗ ತಲಶ್ಶೇರಿ ಕಡೆಯಿಂದ ಅಮಿತ ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಜ್ಜಿ ತಕ್ಷಣವೇ ಸಾವನ್ನಪ್ಪಿದ್ದರು. ಮುಂಡಿಯಾಡ್ ಎಲ್ ಪಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ದೃಶಾನ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮಗು ಆರು ತಿಂಗಳಿನಿಂದ ಕೋಮಾದಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿದೆ.
ಚಿಕಿತ್ಸೆಗೆ ಬೇಕಾದಷ್ಟು ಹಣ ಸಿಗದೆ ಕಂಗಾಲಾಗಿರುವ ದುಸ್ಯಾನಾಗೆ ಸಹಾಯ ಮಾಡಲು ಕುಟುಂಬ ಹಿತೈಷಿಗಳ ನೆರವು ಕೋರುತ್ತಿದೆ.
ಸ್ಮಿತಾ ಎನ್.ಕೆ
ಕೇರಳ ಗ್ರಾಮೀಣ ಬ್ಯಾಂಕ್
ಪಾನೂರು ಶಾಖೆ
ಎಸಿ ನಂ. 4060 210 100 2263
ಐಎಫ್.ಎಸ್.ಸಿ : ಕೆಎಲ್.ಜಿ.ಬಿ.0040602
ಜಿಪೇ ಸಂಖ್ಯೆ- 9567765455