HEALTH TIPS

ಪಡ್ರೆ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ, ಗಡಿಭದ್ರತಾ ಪಡೆ ಯೋಧಗೆ ಗೌರವಾರ್ಪಣೆ

               ಪೆರ್ಲ: 78ನೇ ಸ್ವಾತಂತ್ರ್ಯೋತ್ಸವ  ಅಂಗವಾಗಿ ಪಡ್ರೆ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಡಿ ಭದ್ರತಾ ಪಡೆ ಅಧಿಕಾರಿ ಬಾಲಕೃಷ್ಣ ಪಡ್ರೆ ಅವರು ಧ್ವಜಾರೋಹಣ ನಡೆಸಿದರು. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಅನುಭವಗಳನ್ನು  ಮಕ್ಕಳ ಜೊತೆ ಹಂಚಿಕೊಂಡರು.  

           ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯರಾದ ನರಸಿಂಹ ಪೂಜಾರಿ,  ರಾಮಚಂದ್ರ, ಶಾಲಾ ಪಿ ಟಿ ಎ ಅಧ್ಯಕ್ಷ ಯೋಗೀಶ್ ಕಡಂಬಳಿತ್ತಾಯ, ಎಂಪಿಟಿಎ ಅಧ್ಯಕ್ಷೆ  ಹರ್ಷಲತಾ, ಎನ್‍ಎಂಸಿ ಅಧ್ಯಕ್ಷೆ ಹರಿಣಾಕ್ಷಿ, ಶಾಲಾ ಅಧ್ಯಾಪಕ ಸಿಬ್ಬಂದಿ ವರ್ಗ ಹಾಗೂ ರಕ್ಷಕರು ಪಾಲ್ಗೊಂಡಿದ್ದರು. ಈ ಸಂದರ್ಭ ಎಸ್ಸೆಸೆಲ್ಸಿ, ಪ್ಲಸ್ ಟು, ಎಲ್‍ಎಸ್‍ಎಸ್, ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿ ಸಲಾಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿಗಾನ, ಭಾಷಣ, ನೃತ್ಯ ಹಾಗೂ ಘೋಷಣಾ ವಾಕ್ಯಗಳ ಪ್ರದರ್ಶನ ನಡೆಯಿತು. ಈ ಸಂದರ್ಭ ಗಡಿಭದ್ರತಾ ಪಡೆಯ ಯೋಧ ಬಾಲಕೃಷ್ಣ ಪಡ್ರೆ ಅವರನ್ನು ಗೌರವಿಸಲಾಯಿತು. ಶಾಲಾ ಪ್ರಭಾರ  ಪ್ರಾಂಶುಪಾಲೆ ಉಷಾ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ  ವಾಸುದೇವ ನಾಯಕ್ ವಂದಿಸಿದರು. ಶಿಕ್ಷಕಿ ಸರಸ್ವತಿ ಕೆ.ಎನ್ ಹಾಗೂ ಶಿಕ್ಷಕ ನವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries