HEALTH TIPS

ವಿಲಂಗಾಡ್ ಭೂಕುಸಿತ; ಐದು ವರ್ಷ ಕಳೆದರೂ ಪುನರ್ವಸತಿ ಅಪೂಣ: ತಜ್ಞರ ಸಮಿತಿ ವರದಿ ಸಲ್ಲಿಸಿಕೆ

               ಕೋಝಿಕ್ಕೋಡ್: ವಿಲಂಗಾಡ್ ಭೂಕುಸಿತ ಪ್ರದೇಶಗಳ ಪರಿಸ್ಥಿತಿ ಅಧ್ಯಯನಕ್ಕೆ ಜಿಲ್ಲಾಡಳಿತ ನೇಮಿಸಿದ್ದ ತಜ್ಞರ ತಂಡ ವರದಿ ಸಲ್ಲಿಸಿ ವರ್ಷಗಳಾಗಿವೆ.

                      ಆರ್ಡಿಒ ಪಿ.ಅನ್ವರ್ ಸಾದತ್, ವಿಲಂಗಾಡ್ ಪುನರ್ವಸತಿಗಾಗಿ ನೇಮಕಗೊಂಡ ವಿಶೇಷ ನೋಡಲ್ ಅಧಿಕಾರಿ ಜಿಲ್ಲಾಡಳಿತಕ್ಕೆ ವರದಿ ಹಸ್ತಾಂತರಿಸಿದ್ದರು.

                 ವರದಿ ಪ್ರಕಾರ 487 ಮನೆಗಳ ಪರಿಶೀಲನೆ ನಡೆಸಿದ್ದು, 313 ಮನೆಗಳು ವಾಸಕ್ಕೆ ಯೋಗ್ಯವಾಗಿಲ್ಲ. ಭೂಕುಸಿತ ಸಂಭವಿಸಿದ ಮಂಜಚ್ಚಿಲಿ, ಪನೋಮ್, ವಲಿಯ ಪನೋಮ್, ಆನಕುಝಿ, ಮಾತಂಗೇರಿ, ಕುತ್ತಲ್ಲೂರು, ಪನ್ನಿಯೇರಿ ಮತ್ತು ವಯಾದ್ ಪ್ರದೇಶಗಳಲ್ಲಿ ತಂಡವು ಅಧ್ಯಯನ ನಡೆಸಿತ್ತು. ಈ ಮೊದಲು ಈ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಭೂಕುಸಿತ ಕಂಡು ಬಂದಿತ್ತು. ಇದಾದ ಬಳಿಕ ತಜ್ಞರ ತಂಡ ಅಧ್ಯಯನ ನಡೆಸಿ ಹೊಸ ವರದಿ ಸಲ್ಲಿಸಿತ್ತು.

                ಈ ಪ್ರದೇಶದಲ್ಲಿ 56 ಕುಟುಂಬಗಳು ವಾಸಿಸುತ್ತಿರುವುದನ್ನು ತಂಡ ಪತ್ತೆ ಮಾಡಿದೆ. ಈ ಕುಟುಂಬಗಳನ್ನು ಸ್ಥಳಾಂತರಿಸಬೇಕು ಎಂದು ತಂಡ ಸಲಹೆ ನೀಡಿದೆ. ಆಗಸ್ಟ್ 2019 ರಲ್ಲಿ ಭೂಕುಸಿತ ಸಂಭವಿಸಿತ್ತು. ಆದರೆ ಐದು ವರ್ಷ ಕಳೆದರೂ ವಾಸಕ್ಕೆ ಯೋಗ್ಯವಲ್ಲದ ಸ್ಥಳದಿಂದ ಕುಟುಂಬವನ್ನು ಸ್ಥಳಾಂತರಿಸಲು ಸರ್ಕಾರಕ್ಕೆ ಈ ವರೆಗೂ ಸಾಧ್ಯವಾಗಿಲ್ಲ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries