ಕಾಸರಗೋಡು: ವಯನಾಡು ದುರಂತದಲ್ಲಿ ಮೃತಪಟ್ಟಿರುವ ಅದೆಷ್ಟೋ ಕುಟುಂಬಗಳ ಸದಸ್ಯರ ಆತ್ಮಕ್ಕೆ ಸದ್ಗತಿ ಕೋರಿ ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಬೇಕಲ ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ ಎದುರಿನ ಸಮುದ್ರದಲ್ಲಿ ಬಲಿತರ್ಪಣ ಸಮರ್ಪಿಸಿದ್ದಾರೆ.
ವಯನಾಡಿನ ವಿಪತ್ತುಬಾಧಿತ ಪ್ರದೇಶಕ್ಕೆ ಭೇಟಿನೀಡಿದ್ದ ಪ್ರತಿಪಕ್ಷ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಎರಡು ದಿವಸಗಳ ಸಂತ್ರಸ್ತ À್ರದೇಶದಲ್ಲಿ ಸುತ್ತಾಡಿ, ಪರಿಸ್ಥಿತಿ ಅವಲೋಕನ ನಡೆಸಿದ ನಂತರ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಅವರು ತ್ರಿಕ್ಕನ್ನಾಡ್ ತಲುಪಿದ್ದರು.
ಪ್ರತಿವರ್ಷದತೆ ಈ ಬಾರಿಯೂ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಅವರು ತಮ್ಮ ಪೂರ್ವಜರಿಗೆ ತರ್ಪಣ ಅರ್ಪಿಸಿದ ನಂತರ, ವಯನಾಡ್ ದುರಂತದಲ್ಲಿ ಮರಣಹೊಂದಿದ ಹತ್ತಾರು ಜೀವಗಳಿಗಾಗಿ ಪ್ರತ್ಯೇಕ ಬಲಿತರ್ಪಣ ನಡೆಸಿ ಅವರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸಿದರು.
ವಯನಾಡಿನ ಅತಿಭೀಕರ ದುರಂತದಲ್ಲಿ ಮಡಿದ ಕೆಲವು ಜೀವಗಳಿಗೆ ಮರಣೋತ್ತರ ವಿಧಿವಿಧಾನ ಪೂರೈಸಲೂ ಸಾಧ್ಯವಾಗದ ಸ್ಥಿತಿಯಿದೆ. ಅವರಲ್ಲಿ ತಮ್ಮ ಸಂಬAಧಿಕರೆಲ್ಲರನ್ನೂ ಕಳೆದುಕೊಂಡವರಿದ್ದಾರೆ. ಇಂತಹ ಜಿವಗಳಿಗಾಗಿ ಪ್ರಾರ್ಥಿಸಿ ಬಲಿತರ್ಪಣ ನಡೆಸಿದ್ದೇನೆ ಎಂಬುದಾಗಿ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಪಯ್ಯನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಜ್ ಜತೆಗಿದ್ದರು.