HEALTH TIPS

ಕೆಲವು ಸ್ಥಳಗಳಲ್ಲಿ ಡ್ರೈ ಡೇ ಹಿಂತೆಗೆಯುವ ಸಾಧ್ಯತೆ: ಮದ್ಯ ನೀತಿಯಲ್ಲಿ ಷರತ್ತುಬದ್ಧ ಬದಲಾವಣೆ

              ತಿರುವನಂತಪುರ: ರಾಜ್ಯದ ಮದ್ಯ ನೀತಿಯನ್ನು ಷರತ್ತುಗಳೊಂದಿಗೆ ಬದಲಾಯಿಸಲು ಶಿಫಾರಸು ಮಾಡಲಾಗಿದೆ. ಪ್ರತಿತಿಂಗಳು ಒಂದನೇ ತಾರೀಖು ಮದ್ಯದಂಗಡಿಗಳು ಸಂಪೂರ್ಣವಾಗಿ ತೆರೆಯದಿದ್ದರೂ, ಪ್ರವಾಸೋದ್ಯಮ ತಾಣಗಳಲ್ಲಿ ಡ್ರೈ ಡೇ ಹಿಂತೆಗೆಯುವ ಸಾಧ್ಯತೆಯಿದೆ. 

              ಪ್ರವಾಸೋದ್ಯಮ ಇಲಾಖೆ ನೀಡಿದ ಸೂಚನೆಯಂತೆ ಅಬಕಾರಿ ಇಲಾಖೆ ಈ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಿದೆ.

           ಬಾರ್ ಮಾಲೀಕರ ಬೇಡಿಕೆಯಂತೆ ಅಬಕಾರಿ ಇಲಾಖೆಯು ರಾಜ್ಯದಲ್ಲಿ ಡ್ರೈ ಡೇ ಹಿಂತೆಗೆಯುವ ಬೇಡಿಕೆಯನ್ನು ಸರ್ಕಾರಕ್ಕೆ ತಿಳಿಸಿತ್ತು. ಪ್ರವಾಸೋದ್ಯಮ ಇಲಾಖೆಯ ಸೂಚನೆಯಂತೆ ಈ ಅವಶ್ಯಕತೆ ಇತ್ತು. ಮದ್ಯದ ನೀತಿ ವಿವಾದಕ್ಕೀಡಾಗುತ್ತಿದ್ದಂತೆ, ಅಬಕಾರಿ ಇಲಾಖೆಯು ಷರತ್ತುಗಳೊಂದಿಗೆ ಕರಡು ನೀತಿಯನ್ನು ಬದಲಾಯಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತು. ಪ್ರವಾಸೋದ್ಯಮದ ಭಾಗವಾಗಿರುವ ಡೆಸ್ಟಿನೇಶನ್ ವೆಡ್ಡಿಂಗ್ ಸ್ಥಳಗಳು ಮತ್ತು ಕಾನ್ಫರೆನ್ಸ್ ಸ್ಥಳಗಳಲ್ಲಿ ಡ್ರೈಡೇ  ದಿನವನ್ನು ಹಿಂತೆಗೆಯಲು ಪ್ರಸ್ತುತ ಶಿಫಾರಸು ಮಾಡಲಾಗಿದೆ.

            ಪ್ರವಾಸಿ ವಲಯಗಳೊಂದಿಗೆ ಬರುವ ಅಂತಹ ಪ್ರದೇಶಗಳಲ್ಲಿ ಒಂದನೇ ತಾರೀಖು  ಬಾರ್‍ಗಳು ಸಂಪೂರ್ಣವಾಗಿ ತೆರೆದಿರುತ್ತವೆ. ಈ ದಿನಗಳಲ್ಲಿ ಸಭಾಂಣಗಣ ಸ್ಥಳಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಬಾರ್‍ಗಳು ಕಾರ್ಯನಿರ್ವಹಿಸುವುದಿಲ್ಲ. ಡ್ರೈ ಡೇಯಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಈಗಾಗಲೇ ಅಬಕಾರಿ ಇಲಾಖೆಗೆ ಮಾಹಿತಿ ನೀಡಿತ್ತು. ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುವ ವಿಚಾರವಾಗಿ ಪ್ರವಾಸೋದ್ಯಮ ಇಲಾಖೆ ಚರ್ಚೆಗೆ ಮುಂದಾದಾಗ ಭಾರಿ ವಿವಾದವೂ ಉಂಟಾಯಿತು. ರಾಜ್ಯದಲ್ಲಿ ಡ್ರೈ ಡೇ ಹಿಂತೆಗೆದು 15 ಸಾವಿರ ಕೋಟಿ ಆರ್ಥಿಕ ಲಾಭ ಗಳಿಸಬಹುದು ಎಂದು ಮುಖ್ಯ ಕಾರ್ಯದರ್ಶಿ ಕರೆದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಸಿಪಿಎಂ ನಾಯಕರು ಬಾರ್ ಮಾಲೀಕರಿಂದ ಲಂಚ ಪಡೆಯುತ್ತಿರುವ ಬಗ್ಗೆ ವಿವಾದಗಳು ಎದ್ದಿದ್ದವು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries