ತಿರುವನಂತಪುರ: ಹಿರಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ರಾಜ್ಯ ಆಯುಷ್ ಇಲಾಖೆಯ ನೇತೃತ್ವದಲ್ಲಿ 2400 ವಿಶೇಷ ವಯೋಸಹಜ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.
ರಾಷ್ಟ್ರೀಯ ಆಯುಷ್ ಮಿಷನ್, ಭಾರತೀಯ ಔಷಧ ಇಲಾಖೆ ಮತ್ತು ಹೋಮಿಯೋಪತಿ ಇಲಾಖೆ ಆಶ್ರಯದಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಆಯುರ್ವೇದ, ಹೋಮಿಯೋಪತಿ, ಯೋಗ-ನ್ಯಾಚುರೋಪತಿ, ಸಿದ್ಧ ಮತ್ತು ಯುನಾನಿ ಮುಂತಾದ ಆಯುಷ್ ನ ಎಲ್ಲಾ ಶಾಖೆಗಳನ್ನು ಒಳಗೊಂಡಂತೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಈ ಶಿಬಿರಗಳನ್ನು ರಾಜ್ಯಾದ್ಯಂತ ಸರ್ಕಾರಿ ಆಯುಷ್ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು, ಆಯುಷ್ ಆರೋಗ್ಯ ಕೇಂದ್ರಗಳು, ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಬುಡಕಟ್ಟು ಆಯುಷ್ ಡಿಸ್ಪೆನ್ಸರಿಗಳ ಮೂಲಕ ಪ್ರಾದೇಶಿಕ ಆಧಾರದ ಮೇಲೆ ವಿವಿಧ ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಸೆಪ್ಟೆಂಬರ್ನಲ್ಲಿ ಆಯೋಜಿಸಲಿರುವ ಈ ವೈದ್ಯಕೀಯ ಶಿಬಿರಗಳ ಸೇವೆಯನ್ನು ಗರಿಷ್ಠ ಸಂಖ್ಯೆಯ ಹಿರಿಯ ನಾಗರಿಕರು ಪಡೆದುಕೊಳ್ಳಬೇಕು ಎಂದು ಸಚಿವರು ವಿನಂತಿಸಿರುವರು.
ಅತಿ ಹೆಚ್ಚು ಜೀವಿತಾವಧಿ ಇರುವ ರಾಜ್ಯ ಕೇರಳ. ಹಿರಿಯರ ಆರೋಗ್ಯ ರಕ್ಷಣೆಗೆ ರಾಜ್ಯವು ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತದೆ. ಅದರ ಅಂಗವಾಗಿ ಶಿಬಿರಗಳನ್ನು ಆಯೋಜಿಸಲಾಗಿದೆ. ಆಯುಷ್ ಚಿಕಿತ್ಸಾ ವ್ಯವಸ್ಥೆಗಳ ಮೂಲಕ ವೃದ್ಧರು ಸಾಮಾನ್ಯವಾಗಿ ಅನುಭವಿಸುವ ದೈಹಿಕ ಆರೋಗ್ಯ ಸಮಸ್ಯೆಗಳಾದ ಸ್ನಾಯು ಮತ್ತು ಮೂಳೆ ದೌರ್ಬಲ್ಯ, ನಿದ್ರೆಯ ಕೊರತೆ, ಮಲಬದ್ಧತೆ, ಜೀವನಶೈಲಿ ರೋಗಗಳು ಮತ್ತು ಅವರ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಸುಧಾರಿಸುವ ಉದ್ದೇಶದಿಂದ ಆಯುಷ್ ವಯೋಮಾನದ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಶಿಬಿರಗಳು ಕೇಂದ್ರೀಯ ಆಯುಷ್ ಸಂಶೋಧನಾ ಮಂಡಳಿ ಸಂಸ್ಥೆಗಳು, ಆಯುಷ್ ವೈದ್ಯಕೀಯ ಕಾಲೇಜುಗಳು ಮತ್ತು ಆಯುಷ್ ವೃತ್ತಿಪರ ಸಂಸ್ಥೆಗಳ ಸಹಯೋಗವನ್ನು ಹೊಂದಿರುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ.
ಶಿಬಿರಗಳಲ್ಲಿ ವಿಶೇಷ ರೋಗನಿರ್ಣಯ, ಮೂಲ ಪ್ರಯೋಗಾಲಯ ಸೇವೆಗಳು, ಜಾಗೃತಿ ತರಗತಿಗಳು, ಉಲ್ಲೇಖಿತ ವ್ಯವಸ್ಥೆ, ಉಚಿತ ಔಷಧ ವಿತರಣೆ ಮತ್ತು ಯೋಗ ತರಗತಿಗಳನ್ನು ಆಯೋಜಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಖಾತ್ರಿಪಡಿಸಲಾಗುವುದು.