HEALTH TIPS

ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕಿನ ವಿಶೇಷ ಸಭೆ

         ಕಾಸರಗೋಡು: ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಕಾಸರಗೋಡು ತಾಲೂಕಿನ ವಿಶೇಷ ಸಭೆಯು ಕಾಸರಗೋಡಿನಲ್ಲಿ ಜರುಗಿತು. ಭಜನಾ ಪರಿಷತ್ ಅಧ್ಯಕ್ಷ ಕೆ.ಎನ್. ವೆಂಕಟರಮಣ ಹೊಳ್ಳ  ಅಧ್ಯಕ್ಷತೆ ವಹಿಸಿದ್ದರು.  ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಉಡುಪಿಯ ಸಮನ್ವಯಾಧಿಕಾರಿ ರಾಘವೇಂದ್ರ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟಂಬರ್ 22 ರಿಂದ 29 ರವರೆಗೆ 8 ದಿವಸಗಳವರೆಗೆ ನಡೆಯಲಿರುವ ಭಜನಾ ಕಮ್ಮಟದ ಬಗ್ಗೆ ಹಾಗೂ ಭಜನಾ ಮಂಗಳೋತ್ಸವದ ಬಗ್ಗೆ ಮಾಹಿತಿ ನೀಡಿದರು.  ಭಜನಾ ಸಂಕೀರ್ತನಾಕಾರ, ಹರಿದಾಸರಾದ  ಜಯಾನಂದ ಕುಮಾರ್ ಹೊಸದುರ್ಗ ಅವರು ಕಾಸರಗೋಡಿನಲ್ಲಿ ಭಜನಾ ಪರಿಷತ್ತು ನಡೆದು ಬಂದ ರೀತಿ ಹಾಗೂ ಭಜನಾ ಮಂಡಳಿಗಳ ಸಹಕಾರದ ಬಗ್ಗೆ ವಿವರಿಸಿದರು. ನಗರಸಭಾ ಸದಸ್ಯೆ ಶ್ರೀಲತಾ, ಪೇಟೆ ಶ್ರೀ ವೆಂಕಟರಮಣ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ  ವಿಜಯ ಶೆಟ್ಟಿ, ಭಜನಾ ಸಾಮ್ರಾಟ್  ಮೋಹನ್ ಆಚಾರ್ಯ ಪುಳ್ಕೂರು, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು,  ಉಪಸ್ಥಿತರಿದ್ದರು. 

          ಕಾಸರಗೋಡು ತಾಲೂಕು ಧರ್ಮಸ್ಥಳ ಭಜನಾ ಪರಿಷತ್ತಿನ ಶಾಶ್ವತ ಸಮಿತಿ ರಚನೆ, ವರ್ಷದಲ್ಲಿ ನಾಲ್ಕು ಸಮಿತಿ ಸಭೆಗಳ ಆಯೋಜನೆ, ಕ್ಷೇತ್ರದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ಕನಿಷ್ಠ ಐದು ಮಂಡಳಿಗಳಿಂದ 10 ಶಿಬಿರಾರ್ಥಿಗಳನ್ನು ಕಳುಹಿಸಿ ಕೊಡುವುದು, ಕಮ್ಮಟದ ಭಜನಾ ಮಂಗಳೋತ್ಸವದ ದಿವಸ ಹತ್ತಕ್ಕಿಂತ ಹೆಚ್ಚು ಭಜನಾ ಮಂಡಳಿಗಳನ್ನು ಕಳುಹಿಸಿ ಕೊಡುವುದರ ಜತೆಗೆ ಕಾಸರಗೋಡು ಭಜನಾ ಪರಿಷತ್ತನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಸಮಾಲೋಚಿಸಲಾಯಿತು. ಇದುವರೆಗಿನ ಭಜನಾ ಪರಿಷತ್ತಿನ ಕಾರ್ಯದರ್ಶಿಯಾಗಿ   ಪದ್ಮನಾಭ ಆಚಾರ್ಯ ಅವರನ್ನು ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಯೋಜನಾಧಿಕಾರಿ ಮುಖೇಶ್ ಪ್ರಾಸ್ತವಿಕವಾಗಿ  ಮಾತನಾಡಿ ಸ್ವಾಗತಿಸಿದರು.  ಭಜನಾ ಪರಿಷತ್ತಿನ ಕಾರ್ಯದರ್ಶಿ  ಪದ್ಮನಾಭ ಆಚಾರ್ಯ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries