ಕುಂಬಳೆ : ಕುಂಬಳೆ ಶ್ರೀ ವೀರವಿಠ್ಠಲ ದೇವಸ್ಥಾನದ ವತಿಯಿಂದ ನಿಜ ಶ್ರಾವಣ ಮಾಸದ ಚತುರ್ದಶಿ ದಿನವಾದ ನಿನ್ನೆ ಸಂಜೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆ ಪುಂಡಲೀಕ್ ಭಟ್ ಅವರ ನೇತೃತ್ವದಲ್ಲಿ ಕುಂಬಳೆ ಕೊಯಿಪಾಡಿ ಕಡಪ್ಪುರ ಕಡಲ ತೀರದಲ್ಲಿ ವಿಶೇಷ ಆಚರಣೆ ನಡೆಯಿತು.
ಶ್ರೀ ವಿಷ್ಣು ದೇವರ ಪ್ರೀತಿಗಾಗಿ ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ನಾಡಿನ ಸಮಸ್ತ ನಾಗರಿಕರು ಮಂಗಲ, ಕ್ಷೇಮ, ಅರೋಗ್ಯ, ನಿರ್ಭಯದಿಂದ ಜೀವಿಸುವಂತಾಗಲಿ, ಕಡಲ ಕಿನಾರೆಯಲ್ಲಿ ಜೀವಿಸುವ ಕುಟುಂಬಗಳಿಗೆ ರಕ್ಷಣೆ ಸಿಗಲಿ, ತಮ್ಮ ದೈನಂದಿನ ಜೀವನಕ್ಕೆ ಆಶ್ರಯಿಸಿಕೊಂಡಿರುವ ಮೀನುಗಾರರಿಗೆ ತಮ್ಮ ಉದ್ಯೋಗದಲ್ಲಿ ಸುಖ ಸಮೃದ್ಧಿ ಸಿದ್ದಿ ದೊರಕಲಿ ಹಾಗೂ ಸಮುದ್ರ ರಾಜನು ಶಾಂತನಾಗಲಿ ಎಲ್ಲರನ್ನು ರಕ್ಷಿಸಲಿ ಎಂದು ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿ ಹಾಲು, ಹರಸಿನ ಕುಂಕುಮ, ತೆಂಗಿನಕಾಯಿ, ನಾಣ್ಯಗಳು ಶಿಯಾಳ, ಅಡಿಕೆ, ಫಲ ವಸ್ತುಗಳು ಹಾಗೂ ವೀಳ್ಯದೆಲೆಯನ್ನು ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೆಸರ ಕೆ.ನಾರಾಯಣ ಪ್ರಭು ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.