HEALTH TIPS

ಬ್ಯಾಗಲ್ಲಿ ಬಾಂಬ್ ಎಂದು ಪ್ರತ್ಯುತ್ತರ: ನೆಡುಂಬಶ್ಶೇರಿಯಲ್ಲಿ ವಿಮಾನ ಎರಡು ಗಂಟೆಗಳ ಕಾಲ ವಿಳಂಬ: ಪ್ರಯಾಣಿ ವಶಕ್ಕೆ

               ಕೊಚ್ಚಿ: ಪ್ರಯಾಣಿಕರೋರ್ವರ ತಮಾಷೆಯಿಂದ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ವಿಮಾನ ಹಾರಾಟ ತಡವಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

              ತಿರುವನಂತಪುರಂ ಮೂಲದ ಪ್ರಶಾಂತ್ ನನ್ನು ಬಂಧಿಸಲಾಗಿದೆ. ಲಗೇಜ್ ನಲ್ಲಿ ಬಾಂಬ್ ಇದೆ ಎಂದು ಪ್ರಶಾಂತ್ ಹೇಳಿರುವುದು ಇಕ್ಕಟ್ಟಿಗೆ ಕಾರಣವಾಯಿತು. ತಮಾಷೆಗಾಗಿ ಹೇಳಿದ್ದೇನೆ ಎಂದು ಪ್ರಶಾಂತ್ ವಿವರಿಸಿರುವರು.

           ಬ್ಯಾಗ್‍ನಲ್ಲಿ ಏನಿದೆ ಎಂದು ಭದ್ರತಾ ಸಿಬ್ಬಂದಿ ಕೇಳಿರುವುದು ಇಷ್ಟವಾಗದ ಕಾರಣ ಬಾಂಬ್ ಇದೆ ಎಂದು ಹೇಳಿದ್ದಾಗಿ ಪ್ರಶಾಂತ್ ಹೇಳುತ್ತಾರೆ. ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಪದೇ ಪದೇ ಹೇಳುತ್ತಿದ್ದ ಹಿನ್ನೆಲೆಯಲ್ಲಿ ಆತನ ಬಂಧನವನ್ನು ಭದ್ರತಾ ಬೆದರಿಕೆ ಎಂದು ದಾಖಲಿಸಲಾಗಿದೆ. ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಬೆಳಗಿನ ಜಾವ 2.10ಕ್ಕೆ ಹೊರಡಬೇಕಿದ್ದ ವಿಮಾನ 4.30ಕ್ಕೆ ತಡವಾಗಿ ಟೇಕಾಫ್ ಆಯಿತು. 

           ಪ್ರಶಾಂತ್ ತಮ್ಮ ಕುಟುಂಬದೊಂದಿಗೆ ಥಾಯ್ ಏರ್‍ಲೈನ್ಸ್‍ನಲ್ಲಿ ಥಾಯ್ಲೆಂಡ್‍ಗೆ ಪ್ರಯಾಣಿಸುತ್ತಿದ್ದರು. ಪ್ರಶಾಂತ್ ಜೊತೆಗೆ ಪತ್ನಿ ಮತ್ತು ಪುತ್ರ ಸೇರಿ ನಾಲ್ವರು ಇದ್ದರು. ಕಳೆದ ಮೂರು ತಿಂಗಳಲ್ಲಿ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ನಕಲಿ ಬಾಂಬ್ ಬೆದರಿಕೆ ಸಂಬಂಧ ಮೂವರನ್ನು ಬಂಧಿಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries