ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಗ್ರಶಾಲೆ ನವೀಕರಣಕ್ಕಾಗಿ ಶಿಲಾನ್ಯಾಸ ದೇವಾಲಯ ವಠಾರದಲ್ಲಿ ಜರುಗಿತು. ದೇವಸ್ಥಾನದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕೋಟಿ ಜಪ ಯಜ್ಞದ ಅಧ್ಯಕ್ಷ ಡಾಕ್ಟರ್ ಅನಂತ ಕಾಮತ್ ಶಿಲಾನ್ಯಾಸ ನೆರವೇರಿಸಿದರು. ಕ್ಷೇತ್ರದ ಟ್ರಸ್ಟ್ ಬೋರ್ಡ್ ಚೇರ್ಮನ್ ವಕೀಲ ಗೋವಿಂದನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ದೇವಾಲಯದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಪೌರೋಹಿತ್ಯ ವಹಿಸಿದ್ದರು. ಟ್ರಸ್ಟ್ ಬೋರ್ಡ್ ಸದಸ್ಯರದ ರಾಮ್ ಪ್ರಸಾದ್, ಮನೋಜ್ ಎ.ಸಿ ಬಾಗವಹಿದರು, ಜಪಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಆರ್, ಕಿಶೋರ್ ಎಸ್ವಿಟಿ, ಸಿ.ವಿ ಪೆÇದುವಾಳ್, ಅರ್ಜುನನ್ ತಾಯಲಂಗಾಡಿ, ಎಂ.ಕೆ ಚಂದ್ರಶೇಕರ್, ಮೀರಾ ಕಾಮತ್, ಶಾರದಾ ಸಾಯಿ ಮೊದಲದವರು ಪಾಲ್ಗೊಮಡಿದ್ದರು.